Advertisement

ಕೋವಿಡ್ 19 ಅವಾಂತರದಿಂದ 80 ಸಾವಿರ ಮಂದಿಗೆ ಉದ್ಯೋಗ ನಷ್ಟ ಭೀತಿ!

03:10 AM Apr 08, 2020 | Hari Prasad |

ಕೋವಿಡ್ 19 ಸೋಂಕು ಹಾಗೂ ಲಾಕ್‌ ಡೌನ್‌ನಿಂದಾಗಿ ದೇಶದಾದ್ಯಂತ ಅಂದಾಜು 80 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ರೀಟೇಲ್ಸ್‌ ಅಸೋಸಿಯೇಷನ್‌ ಆಫ್ ಇಂಡಿಯಾ (ಆರ್‌ಎಐ) ತಿಳಿಸಿದೆ. ಈ ಸಂಬಂಧ ಸಮೀಕ್ಷೆ ನಡೆಸಿರುವ ಆರ್‌ಎಐ, 768 ರೀಟೇಲರ್‌ಗಳನ್ನು ಮತ್ತು 3,92,963 ಮಂದಿಯನ್ನು ಸಂಪರ್ಕಿಸಿದೆ.

Advertisement

ತಮ್ಮಲ್ಲಿರುವ ಸಿಬಂದಿಯಲ್ಲಿ ಶೇ.30 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕುವುದಾಗಿ ಸಣ್ಣ ರೀಟೇಲರ್‌ಗಳು ತಿಳಿಸಿದ್ದಾರೆ. ಇದರೊಂದಿಗೆ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.20 ಮಂದಿ ಕೆಲಸ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಆರ್‌ಎಐ ತಿಳಿಸಿದೆ.

ಕಾಳಸಂತೆಗೆ ಕಡಿವಾಣಕ್ಕೆ ಸೂಚನೆ
ಲಾಕ್‌ ಡೌನ್‌ನ ಈ ಪರಿಸ್ಥಿತಿಯಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಹಾಗೂ ಕಾಳಸಂತೆಯ ಮಾರಾಟವನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೇಂದ್ರದ ಅಧಿಕಾರಿಗಳು ರಾಜ್ಯ ಸರಕಾರಗಳ ಸಹಕಾರದೊಂದಿಗೆ ಅಕ್ರಮ ದಾಸ್ತಾನು, ಕಾಳಸಂತೆ ವಿರುದ್ಧ ಸಮರ ಸಾರಬೇಕೆಂದು ಅವರು ಸೂಚಿಸಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಯಾ ಶ್ರೀವಾಸ್ತವ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next