Advertisement

ಕೋವಿಡ್ 19 ಲಾಕ್ ಕ್‌ಡೌನ್‌: ಕಷ್ಟದಲ್ಲಿ ರೈತಾಪಿ ವರ್ಗ

07:33 PM Apr 07, 2020 | Suhan S |

ಮುಂಬಯಿ, ಎ. 6: ಕೋವಿಡ್ 19 ಹಿನ್ನೆಲೆ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಘೋಷಿಸಿದ ಅನಂತರ ಮಹಾರಾಷ್ಟ್ರದ ಜುನ್ನಾರ್‌ ಜಿಲ್ಲೆಯ ಡೈರಿ ಮತ್ತು ತರಕಾರಿ ಬೆಳೆಯುವ ರೈತರಿಗೆ ಪುಣೆ, ನವಿಮುಂಬಯಿಗೆ ದೈನಂದಿನ ಸರಬರಾಜು ಸರಪಳಿ ಕಡಿತಗೊಂಡಿದೆ. ಈ ಹಿನ್ನೆಲೆ ಲಾಕ್‌ಡೌನ್‌ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

Advertisement

ಹಲವಾರು ರೈತರು ತಾವು ಬೆಳೆದ ಬೆಳೆಗಳನ್ನು ನಗರಗಳ ಪ್ರಮುಖ ಮಾರುಕಟ್ಟೆಗಳಿಗೆ ಸಾಗಿಸಲು ಸಾಧ್ಯವಾಗದ ಕಾರಣ ತರಕಾರಿ ಮತ್ತು ಹಣ್ಣುಗಳು ತಮ್ಮ ಜಮೀನಿನಲ್ಲಿ ಕೊಳೆಯುತ್ತಿವೆ. ಅಲ್ಲದೆ ತೆರೆದ ಸ್ಥಳದಲ್ಲಿ ಎಸೆಯಲ್ಪಡುತ್ತಿವೆ. ರೈತರು ಕೆಲವು ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದವರು ಸಹ ನಷ್ಟದಲ್ಲಿದ್ದಾರೆ. ಲಾಕ್‌ಡೌನ್‌ ಘೊಷಣೆಯಾದ ಅನಂತರ ಎಂಎಂಆರ್‌ ವ್ಯಾಪತಿಯಲ್ಲಿ ಈಗಾಗಲೇ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ತೀವ್ರ ಏರಿಕೆ ಕಾಣುತ್ತಿದೆ. ಆದಾಗ್ಯೂ ಜುನ್ನಾರ್‌ನ ರೈತರು ತಮ್ಮ ತರಕಾರಿಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸೌತೆಕಾಯಿಯನ್ನು ಪ್ರತಿ ಕಿಲೋಗೆ 5 ರೂ., ಈರುಳ್ಳಿ 10 ರೂ. ಗಳಿಂದ ರಿಂದ 15 ರೂ. ಮತ್ತು ಎಲೆಕೋಸು ಮತ್ತು ಹೂಕೋಸು 10 ರೂ. ಗಳೆಗೆ ಮಾರಾಟ ಮಾಡಲಾಗುತ್ತಿದೆ. ನಮ್ಮ ಉತ್ಪಾದನಾ ವೆಚ್ಚವನ್ನು ಮರುಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಯಾವುದೇ ಲಾಭವನ್ನು ಗಳಿಸುವ ಭರವಸೆ ನಮಗಿಲ್ಲ ಎಂದು ಜುನ್ನಾರ್‌ನ ಪಶುವೈದ್ಯ ರೈತ ಡಾ. ದತ್ತಾ ಖೋಮನೆ ತಿಳಿಸಿದ್ದಾರೆ.

ಜುನ್ನಾರ್‌ನ ಹೊಲಗಳಲ್ಲಿ ಟನ್‌ಗಳಷ್ಟು ಈರುಳ್ಳಿ ಮತ್ತು ಸೌತೆಕಾಯಿಗಳು ಕೊಳೆಯುತ್ತಿವೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಿರ್ಣಾಯಕ ಮಾರುಕಟ್ಟೆಗಳಿಗೆ ಅವುಗಳ ಸರಬರಾಜು ಸರಪಳಿಗಳನ್ನು ಕತ್ತರಿಸಲಾಗಿದೆ. ಮುಂಬಯಿಂದ 240 ಕಿ.ಮೀ. ದೂರದಲ್ಲಿ ರುವ ಜುನ್ನಾರ್‌ ತಾಲೂಕಿನಲ್ಲಿ 183 ಹಳ್ಳಿಗಳಲ್ಲಿ 6,000 ನಿವಾಸಿಗಳಿವೆ. ಡಿಂಗೋರ್‌ ಗ್ರಾಮದಿಂದ ಧನಾತ್ಮಕ ಪರೀಕ್ಷೆ ನಡೆಸಿದ ಮೂವರು ಗ್ರಾಮಸ್ಥರು ಲಾಕ್‌ ಡೌನ್‌ ಹೇರಿದ ಅನಂತರ ಮುಂಬಯಿಂದ ಜುನ್ನಾರ್‌ಗೆ ಮರಳಿದ್ದರು. ಅಂದಿನಿಂದ ಸ್ಥಳೀಯರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಮುಂಬಯಿ ಅಥವಾ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 650 ಗ್ರಾಮಸ್ಥರು ತಾಲೂಕಿಗೆ ಮರಳಿದ್ದಾರೆ ಮತ್ತು ಪ್ರಸ್ತುತ ಮನೆಯಲ್ಲಿದ್ದಾರೆ ಎಂದು ಮತ್ತೂಬ್ಬ ರೈತ ಅಮೋಲ್‌ ಕೊರ್ಡೆ ಹೇಳಿದ್ದಾರೆ. ಹೆಚ್ಚಿನ ಗ್ರಾಮಸ್ಥರು ತಮ್ಮ ಉತ್ಪನ್ನಗಳನ್ನು ವಾಶಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ, ಏಕೆಂದರೆ ಅದು ಲಾಭದಾಯಕವಲ್ಲ. ಅವರು ಬದಲಿಗೆ ಪುಣೆ, ಖಾರ್ಘ‌ರ್‌ ಮತ್ತು ಮುಂಬಯಿಗಳಲ್ಲಿ ತಮ್ಮದೇ ಆದ ತರಕಾರಿ ಮತ್ತು ಹಣ್ಣಿನ ಮಳಿಗೆಗಳನ್ನು ಸ್ಥಾಪಿಸಿದ್ದಾರೆ ಮತ್ತು ಅವರ ಉತ್ಪನ್ನಗಳನ್ನು ಪ್ರತಿದಿನ ತಮ್ಮ ಹೊಲಗಳಿಂದ ಈ ನಗರಗಳಿಗೆ ಸಾಗಿಸಲಾಗುತ್ತದೆ. ಲಾಕ್‌ಡೌನ್‌ ನಿಂದಾಗಿ ನಮ್ಮ ವ್ಯವಹಾರವು ಸ್ಥಗಿತಗೊಂಡಿದೆ.

ನಮ್ಮಲ್ಲಿ ಟನ್‌ ತರಕಾರಿಗಳು ಮತ್ತು ಹಣ್ಣುಗಳು ಈರುಳ್ಳಿ, ಸೌತೆಕಾಯಿ, ಬದನೆಕಾಯಿ, ಟೊಮೆಟೊ, ಮೂಲಂಗಿ, ಹೂಕೋಸು,  ಎಲೆಕೋಸು, ಪಪ್ಪಾಯಿ ಮತ್ತು ದಾಳಿಂಬೆ ಗ್ರಾಮದಲ್ಲಿ ಬಿದ್ದಿವೆ ಎಂದು ರೈತ ರವೀಂದ್ರ ಜಾಧವ್‌ ಹೇಳಿದ್ದಾರೆ. ಜಾಧವ್‌ ಕೆಲವು ವರ್ಷಗಳ ಹಿಂದೆ ಎರಡು ಎಕರೆ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಖರೀದಿಸಿದ್ದರು. ಅನಂತರ ಅವರು ಜಮೀನಿಗೆ ನೀರಾವರಿ ಮಾಡಲು ಪೈಪ್‌ಲೈನ್‌ಗಳನ್ನು ಸ್ಥಾಪಿಸಲು ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದರು. ನಾನು ಸುಮಾರು 13 ಪ್ರತಿಶತದಷ್ಟು ಬಡ್ಡಿಯನ್ನು ಪಾವತಿಸುತ್ತೇನೆ, ಆದರೆ ಇಂದು ನಾನು ಪ್ರತಿದಿನ 10,000 ರೂ. ನಷ್ಟವನ್ನು ಅನುಭವಿಸುತ್ತಿದ್ದೇನೆ. ಈ ಲಾಕ್‌ಡೌನ್‌ ಮುಂದುವರಿದರೆ ನಾವು ರೈತರು ತೀವ್ರ ಆರ್ಥಿಕ ತೊಂದರೆ ಅನುಭವಿಸುವುದು ಖಚಿತ ಎಂದು ಅವರು ಹೇಳಿದರು.

Advertisement

ಇನ್ನೊಬ್ಬ ಸ್ಥಳೀಯ ರೈತ ಅಮೋಲ್‌ ಕೊರ್ಡೆ ಮಾತನಾಡಿ, ನಮಗೆ ಇಲ್ಲಿ ಯಾವುದೇ ಕೋಲ್ಡ್ ಸ್ಟೋರೇಜ್‌ ಸೌಲಭ್ಯಗಳಿಲ್ಲ, ಮತ್ತು ಪ್ರಸ್ತುತ ದಿನದ ತಾಪಮಾನವು ಸುಮಾರು 38 ಡಿಗ್ರಿಗಳಷ್ಟಿದೆ. ನಮಗೆ ಬೇರೆ ಆಯ್ಕೆಗಳಿಲ್ಲ, ಆದರೆ ತರಕಾರಿಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಿ ಅಥವಾ ಅವುಗಳನ್ನು ಡಂಪ್‌ ಮಾಡುತ್ತಿದ್ದೇವೆ. ಇವು ಬೇಗನೆ ಹಾಳಾಗುವ ವಸ್ತುಗಳು. ಇದಕ್ಕೆ ಮಾರುಕಟ್ಟೆಯ ಅಗತ್ಯವಿರುತ್ತದೆ, ಇಲ್ಲದಿದ್ದರೆ ಅದು ನಮಗೆ ನಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ, ಈ ಪ್ರದೇಶವು ಬರವನ್ನು ಎದುರಿಸಿತು, ಅದು ಅವರ ಖಾರಿಫ್ ಬೆಳೆಗಳನ್ನು ನಾಶಮಾಡಿತು. ಅಕ್ಟೋಬರ್‌-ನವೆಂಬರ್‌ನಲ್ಲಿ ಧಾರಾಕಾರ ಅಕಾಲಿಕ ಮಳೆ ಸುಗ್ಗಿಯ ಅವಧಿಯಲ್ಲಿ ಮತ್ತಷ್ಟು ನಷ್ಟಕ್ಕೆ ಕಾರಣವಾಯಿತು. ರಾಜ್ಯ ಮತ್ತು ಭಾರತದ ಇತರ ಭಾಗಗಳಲ್ಲಿನ ರೈತರು ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ನಾವು ಸರಕಾರದ ಸಹಾಯವನ್ನು ಅವಲಂಬಿಸುವುದನ್ನು ಎಷ್ಟು ದಿನ ಮುಂದುವರಿಸಬಹುದು? ಎಂದು ಡಾ| ಖೋಮನೆ ಅವರು ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next