Advertisement

ಊರಿಗೆ ಬಂದ ಕಾರ್ಮಿಕನಿಗೆ ಮರದ ಮೇಲೆಯೇ ಕ್ವಾರಂಟೈನ್‌!

01:59 AM May 06, 2020 | Hari Prasad |

ಲಾಕ್‌ಡೌನ್‌ ನಡುವೆ ಅತಂತ್ರನಾಗಿದ್ದ ರಾಜಸ್ಥಾನದ ಕಾರ್ಮಿಕನೊಬ್ಬ, ಊರಿಗೆ ಮರಳಿ, ಮರದ ಮೇಲೆ ಸ್ವಯಂ ಕ್ವಾರಂಟೈನ್‌ ಅನುಭವಿಸುತ್ತಿದ್ದಾನೆ.

Advertisement

ಅಜ್ಮೀರ್‌ ಜಿಲ್ಲೆಯಿಂದ ಭಿಲ್ವಾರಾದ ತನ್ನ ಹಳ್ಳಿಗೆ 200 ಕಿ.ಮೀ. ನಡೆದು ಬಂದ, 24 ವರ್ಷದ ಕಾರ್ಮಿಕನನ್ನು ಗ್ರಾಮಸ್ಥರು ಊರಿನ ಬಾಗಿಲಿನಲ್ಲೇ ತಡೆಹಿಡಿದರು. ನಿನಗೆ ಸೋಂಕು ಇರಬಹುದು, ಅಲ್ಲೇ ನಿಲ್ಲು ಎಂದು ಒತ್ತಾಯಿಸಿದರು.

ಆರೋಗ್ಯ ಸಿಬಂದಿ ಪರೀಕ್ಷಿಸಿದಾಗ, ಅಂಥ ಸೋಂಕೇನೂ ಕಂಡುಬಂದಿಲ್ಲವಾದರೂ, 14 ದಿನಗಳ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆಗಲೂ ಜನ ಊರಿನ ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ.

ಗ್ರಾಮಸ್ಥರೊಂದಿಗೆ ಕುಟುಂಬದವರೂ ಸೇರಿ, ಮರದ ಮೇಲೆ ‘ಮಕಾನ್‌’ ನಿರ್ಮಿಸಿಕೊಟ್ಟಿದ್ದಾರೆ. ಮರ ಏರಿ ಕುಳಿತ ಕಾರ್ಮಿಕ ಇರುವ ಸ್ಥಳಕ್ಕೆ ನಿತ್ಯವೂ ಮನೆಯಿಂದ ಆಹಾರ ಪೂರೈಕೆ ಮಾಡಲಾಗುತ್ತಿದೆ. ಆರೋಗ್ಯ ಸಿಬಂದಿ ನಿತ್ಯ ಬಂದು ಈತನನ್ನು ಪರೀಕ್ಷೆಗೊಳಪಡಿಸುತ್ತಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next