Advertisement

ಆಮ್ಲಜನಕ ಕೊರತೆಯಿಂದ ದೇಶದಲ್ಲಿ ಯಾರೂ ಕೋವಿಡ್ ಸೋಂಕಿತರು ಸತ್ತಿಲ್ಲ: ಕೇಂದ್ರ ಸರ್ಕಾರ

08:50 PM Mar 25, 2022 | Team Udayavani |

ನವದೆಹಲಿ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ವೇಳೆ ಯಾರೂ ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದೆ.

Advertisement

ಈ ಬಗ್ಗೆ ಲಿಖಿತವಾಗಿ ಉತ್ತರಿಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಸಹಾಯಕ ಸಚಿವೆ ಭಾರತಿ ಪ್ರವೀಣ್‌ ಪವಾರ್‌, “ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ನೀಡುವ ಕೊರೊನಾ ಸಾವಿನ ವರದಿಯನ್ನು ಕೇಂದ್ರ ನಿರ್ವಹಿಸುತ್ತದೆ.

ಇದನ್ನೂ ಓದಿ :ಯೋಗಿ ಸಂಪುಟ 2.0 ರಲ್ಲಿ ಐವರು ಮಹಿಳೆಯರಿಗೆ ಸಚಿವ ಪದವಿ

ಅಂತೆಯೇ ಕೊರೊನಾ ವೇಳೆ ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿರುವವರ ವರದಿ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿತ್ತು. ಹಲವು ರಾಜ್ಯಗಳು ಅದಕ್ಕೆ ಪ್ರತಿಕ್ರಿಯಿಸಿವೆ. ಆ ವರದಿಗಳ ಪ್ರಕಾರ ಯಾವ ರಾಜ್ಯದಲ್ಲಿಯೂ ಆಮ್ಲಜನಕ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿಲ್ಲ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next