Advertisement

ದೆಹಲಿ ನಿಜಾಮುದ್ದೀನ್ ಮಸೀದಿ ಸಭೆಗೆ ಕರ್ನಾಟಕದಿಂದ ಎಷ್ಟು ಮಂದಿ ತೆರಳಿದ್ದರು ಗೊತ್ತೇ?

09:07 AM Apr 01, 2020 | Nagendra Trasi |

ಬೆಂಗಳೂರು:ಇದೀಗ ದೇಶಾದ್ಯಂತ ಸದ್ದು ಮಾಡುತ್ತಿರುವ ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಕರ್ನಾಟಕದಿಂದ ಸುಮಾರು 45ಮಂದಿ ಭಾಗವಹಿಸಿದ್ದರು ಎಂಬ ಅಂಶ ಬಯಲಾಗಿದ್ದು, ಇವರಲ್ಲಿ ಶಿರಾದ ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿ ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

Advertisement

ಮಾರ್ಚ್ 10ರಂದು ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ರಾಜ್ಯದ 45 ಮಂದಿ ಭಾಗವಹಿಸಿದ್ದರು ಎಂದು ಟ್ವೀಟ್ ಮಾಡಿದ್ದು, ಶಿರಾದ ವ್ಯಕ್ತಿ ರಾಜ್ಯದಲ್ಲಿ ಪತ್ತೆಯಾದ 60ನೇ ಪ್ರಕರಣವಾಗಿತ್ತು. ಆತನ 13 ವರ್ಷದ ಮಗನನ್ನು ಕೂಡಾ ಪರೀಕ್ಷೆಗೊಳಪಡಿಸಲಾಗಿದ್ದು ಪಾಸಿಟಿವ್ ವರದಿ ಬಂದಿದ್ದು ಇದು 84ನೇ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.

ತುಮಕೂರು ವ್ಯಕ್ತಿ ದೆಹಲಿಯಿಂದ ರೈಲಿನಲ್ಲಿ ಯಶವಂತಪುರಕ್ಕೆ ಮಾರ್ಚ್ 14ರಂದು ಆಗಮಿಸಿದ್ದರು. ಬೆಂಗಳೂರಿನಿಂದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಶಿರಾಕ್ಕೆ ಬಂದಿರುವುದಾಗಿ ಟ್ರಾವೆಲ್ ಹಿಸ್ಟರಿ ನೀಡಿದ್ದಾರೆ. ದೆಹಲಿ ಮಸೀದಿ ಧಾರ್ಮಿಕ ಸಭೆಗೆ ತೆರಳಿದ್ದ 45 ಮಂದಿಯನ್ನು ಗುರುತಿಸಲಾಗಿದ್ದು, ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಈ ಎಲ್ಲರಿಂದಲೂ ಸೋಂಕು ಹರಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next