Advertisement

ಕೋವಿಡ್ 19: ತಿಪ್ಪೆಗೆ ಸೇರಿದ ಕ್ಯಾಪ್ಸಿಕಂ

11:32 AM Apr 04, 2020 | Suhan S |

ದೇವನಹಳ್ಳಿ: ಕೋವಿಡ್ 19 ಸೋಂಕು ಭೀತಿಯಿಂದ ರೈತರು ತತ್ತರಿಸುತ್ತಿದ್ದು ತಾಲೂಕಿನ ಕ್ಯಾಪ್ಸಿಕಂ ಬೆಳೆದ ರೈತ ಸಾಲದ ಸುಳಿಯಲ್ಲಿ ಸಿಲುಕಿದ್ದು, ಬೆಳೆದ ಬೆಳೆಯನ್ನು ತಿಪ್ಪೆಗೆ ಸುರಿದಿದ್ದಾರೆ.

Advertisement

ಇಲ್ಲಿನ ಅಣ್ಣೇಶ್ವರ ಗ್ರಾಮದ ಕ್ಯಾಪ್ಸಿಕಂ ಬೆಳೆಗಾರ ರೈತ ಮುನಿರಾಜು 2 ಎಕರೆ ಜಮೀನಿನಲ್ಲಿ ಹಳದಿ, ಕೆಂಪು, ಹಸಿರು ಬಣ್ಣದ ಕ್ಯಾಪ್ಸಿಕಂ ಬೆಳೆಯಲು ಬ್ಯಾಂಕಿನಿಂದ 24 ಲಕ್ಷ ಸಾಲ ಪಡೆದಿದ್ದರು. ಬೆಳೆ ಮೂರು ಬಾರಿ ಕೊಯ್ಲಿನಿಂದ 2 ಟನ್‌ ಆಗಿತ್ತು. ಪ್ರತಿ ಕ್ವಿಂಟಲ್‌ ಕ್ಯಾಪ್ಸಿಕಂ 800 ರೂಗೆ ಮಾರಾಟವಾಗಿತ್ತು. ಲಾಕ್‌ ಡೌನ್‌ ನಂತರ ಬೆಳೆ ಸಾಗಾಟಕ್ಕೆ ಈವರೆಗೆ ಪಾಸ್‌ ನೀಡಿಲ್ಲ. ಕಾಡಿ ಬೇಡಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮಾರುಕಟ್ಟೆಗೆ ಹೋದರೆ ಪ್ರತಿ ಕೆ.ಜಿ ಗೆ 3-4 ರೂ ಬೆಳೆ ಹೇಳುತ್ತಾರೆ. ಹೀಗಾಗಿ ತಿಪ್ಪೆಗೆ ಸುರಿದಿದ್ದೇನೆ. ಕೋವಿಡ್ 19  ಭೀತಿ ಇಲ್ಲದಿದ್ದರೆ ಬಂಡವಾಳ ತೆಗೆದು ಕನಿಷ್ಠ 8-10 ಲಕ್ಷ ರೂ ಲಾಭ ಸಿಗುವ ನಿರೀಕ್ಷೆ ಇತ್ತು ಎಂದು ತಮ್ಮ ಅಳಲು ತೋಡಿಕೊಂಡರು.

ಕ್ಯಾಪ್ಸಿಕಂ ಹಾಗೂ ಇನ್ನಿತರೆ ತರಕಾರಿ ಬೆಳೆಯುವ ರೈತರು ಪಾಸ್‌ ಪಡದು ಮಾರುಕಟ್ಟೆ, ಇನ್ನಿತರೆ ಕಡೆಗಳಲ್ಲಿ ತರಕಾರಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗಾಣಿಕೆ, ಮಾರಾಟ ಮಾಡಬಾರದು ಎಂದು ಸೂಚಿಸಲಾಗಿದೆ. ಮಹಾಂತೇಶ್‌ ಮುರುಗೋಡ್‌, ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕ

 

  ಎಸ್‌ ಮಹೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next