Advertisement

ಚಿತ್ರ ಬಿಡಿಸಿ ಕೋವಿಡ್ 19 ಅರಿವು

03:12 PM Apr 08, 2020 | Suhan S |

ಕನಕಪುರ: ಲಾಕ್‌ಡೌನ್‌ ಆದೇಶ ಉಲ್ಲಂ ಸುತ್ತಿರುವ ಸಾರ್ವಜನಿಕರಿಂದ ಹೈರಾಣಾಗಿರುವ ಪೊಲೀಸ್‌ ಇಲಾಖೆ ಕೋವಿಡ್ 19 ಸೋಂಕಿನ ಬಗ್ಗೆ ರಸ್ತೆಯಲ್ಲಿ ಕೋವಿಡ್ 19  ಚಿತ್ರ ಬಿಡಿಸಿ ವಿನೂತನವಾಗಿ ಜಾಗೃತಿ ಮೂಡಿಸಿದರು. ಲಾಕ್‌ ಡೌನ್‌ ಆದೇಶವಿದ್ದರೂ ನಗರದಲ್ಲಿ ಅನಗತ್ಯವಾಗಿ ವಾಹನ ಗಳಲ್ಲಿ ಸಂಚರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಇರುವುದು, ಮಾಂಸದಂಗಡಿಗಳಲ್ಲಿ ಮುಗಿ ಬೀಳುವುದು ಸಾಮಾನ್ಯವಾಗಿದೆ. ಇನ್ನು ಸುಖಾಸುಮ್ಮನೆ ತಿರುಗಾಡುವ ಬೈಕ್‌ ವಶಕ್ಕೆ ಪಡೆದು ಲಾಕ್‌ಡೌನ್‌ ಆದೇಶ ಮುಗಿಯುವವರೆಗೂ ವಾಹನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

Advertisement

ಈಗ ನಗರದ ಚನ್ನಬಸಪ್ಪ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋವಿಡ್ 19  ವೈರಸ್‌ ಚಿತ್ರ ಬಿಡಿಸಿ “ಮನೆಯಿಂದ ಹೊರಗೆ ಬಂದರೆ ನೀನು, ನಿಮ್ಮ ಮನೆಗೆ ಬರುವೆ ನಾನು’ ಎಂಬ ಜಾಗೃತಿ ಸಂದೇಶ ಸಾರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next