Advertisement

ಕೋವಿಡ್ ಅಳಿಸಲು ಬರಿಗಾಲ ಹರಕೆ!

12:59 PM Apr 30, 2020 | sudhir |

ಮಂಗಳೂರು: ಕೋವಿಡ್ ಮಹಾಮಾರಿಯನ್ನು ದೇಶದಿಂದ ತೊಲಗಿಸು ಎಂದು ಉತ್ತರ ಕರ್ನಾಟಕದ ಮಹಿಳೆಯೊಬ್ಬರು ತುಳುನಾಡಿನ ಕಲ್ಲುರ್ಟಿ ದೈವದ ಮೊರೆ ಹೊಕ್ಕಿದ್ದಾರೆ. ರೋಗ ಕೊನೆ ಆಗುವ ವರೆಗೂ ಬರಿಗಾಲಲ್ಲೇ ನಡೆಯುವ ಹರಕೆ ಈಕೆಯದು.

Advertisement

ಈಕೆ ಬಾದಾಮಿ ಮೂಲದ ಬಸಮ್ಮ.  ಇವರು ವಾಸವಾಗಿರುವ ಕೂಳೂರು ಗುಡ್ಡೆಯಂಗಡಿ ಯಲ್ಲಿ ಕಲ್ಲುರ್ಟಿ ದೈವಸ್ಥಾನವಿದೆ. ಪತಿ ಮದ್ಯಪಾನಿಯಾಗಿದ್ದು, ಮಕ್ಕಳು ಚಿಕ್ಕವರಿದ್ದಾಗಲೇ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಬಸಮ್ಮ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದು, ಸಂಕಷ್ಟ ದೂರಮಾಡೆಂದು ದೈವವನ್ನು ಕೇಳಿಕೊಂಡಿದ್ದರು. ಪವಾಡವೆಂಬಂತೆ ಮರುದಿನವೇ ಕೆಲಸಕ್ಕೆ ಕರೆ ಬಂದಿತ್ತು. ಅಲ್ಲಿಂದ ನಿರಂತರವಾಗಿ ಆ ದೈವವನ್ನು ನಂಬಿಕೊಂಡಿದ್ದಾರೆ. ಬಸಮ್ಮ ಕೆಲಸಕ್ಕಾಗಿ ನಿತ್ಯ ಐದಾರು ಕಿ.ಮೀ. ತನಕ ನಡೆಯುತ್ತಿದ್ದರು. ಪ್ರಸ್ತುತ ಕೆಲಸ ಕಡಿಮೆ ಇದ್ದರೂ ಕೊರೊನಾ ಕಷ್ಟ ಕಳೆಯಲೆಂಬ ಹರಕೆ ತೀರಿಸಲು ಅಷ್ಟು ದೂರ ನಡಿಗೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next