Advertisement

ಇಂದಿನಿಂದ ನ್ಯಾಯಾಲಯ ಕಲಾಪ ಪುನರಾರಂಭ

07:51 AM Jun 01, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಜೂ. 1ರಿಂದ ಮತ್ತೆ ಕಲಾಪಗಳು ಆರಂಭಗೊಳ್ಳಲಿವೆ.

Advertisement

ಆವರಣದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಆಯ್ದ ನ್ಯಾಯಾಧೀಶರು, ನ್ಯಾಯವಾದಿಗಳು ಮತ್ತು ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸಂಕೀರ್ಣದಲ್ಲಿ 18 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಜೂ. 1ರಂದು 9 ಹಾಗೂ 2ರಂದು 9 ನ್ಯಾಯಾಲಯಗಳು ಕಲಾಪ ನಡೆಸಲಿವೆ. ಒಂದು ನ್ಯಾಯಾಲಯದಲ್ಲಿ 20 ನ್ಯಾಯವಾದಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಬೆಳಗ್ಗೆ ಹಾಗೂ ಮಧ್ಯಾಹ್ನ ತಲಾ 10 ಪ್ರಕರಣಗಳ ವಿಚಾರಣೆ ನಡೆಯಲಿವೆ. ನ್ಯಾಯಾಲಯದ ಒಳಗೆ ಕಕ್ಷಿದಾರರು, ಆರೋಪಿಗಳ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ.

ಕಕ್ಷಿದಾರರು ನ್ಯಾಯವಾದಿಗಳಿಂದ ಮಾಹಿತಿ ಪಡೆಯಬಹುದಾಗಿದೆ. ನ್ಯಾಯಾಲಯಕ್ಕೆ ಆಗಮಿಸುವವರಿಗೆ ಮಾಸ್ಕ್, ಸ್ಯಾನಿಟೈಜೇಶನ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next