Advertisement

Kangana Ranaut ಸಲ್ಲಿಸಿದ್ದ ದೂರು: ಜಾವೇದ್ ಅಖ್ತರ್ ವಿರುದ್ಧದ ವಿಚಾರಣೆಗೆ ಕೋರ್ಟ್ ತಡೆ

10:43 PM Aug 24, 2023 | Team Udayavani |

ಮುಂಬಯಿ: ಬಾಲಿವುಡ್ ನಟಿ ಕಂಗನಾ ರಣಾವತ್ ಸಲ್ಲಿಸಿದ್ದ ದೂರಿನ ಅನ್ವಯ ಹಿರಿಯ ಸಾಹಿತಿ ಜಾವೇದ್ ಅಖ್ತರ್ ವಿರುದ್ಧದ ವಿಚಾರಣೆಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯ ಗುರುವಾರ ತಡೆ ನೀಡಿದೆ.

Advertisement

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ದಿಂಡೋಶಿ ) ಎ.ಝಡ್ ಖಾನ್ ಅವರು ಆದೇಶವನ್ನು ಹೊರಡಿಸಿದ್ದಾರೆ ಎಂದು ಅಖ್ತರ್ ಪರ ವಕೀಲ ಜಯ್ ಭಾರದ್ವಾಜ್ ಹೇಳಿದ್ದಾರೆ.ಕಂಗನಾ ಅವರ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ತನ್ನ ವಿರುದ್ಧ ಹೊರಡಿಸಿದ ಸಮನ್ಸ್ ವಿರುದ್ಧ ಅಖ್ತರ್ ಸಲ್ಲಿಸಿದ ಪರಿಷ್ಕರಣೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

ಕಂಗನಾ ಅವರು ತಮ್ಮ ದೂರಿನಲ್ಲಿ ಅಖ್ತರ್ ವಿರುದ್ಧ “ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ” ಎಂದು ಆರೋಪಿಸಿದ್ದಾರೆ. ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜುಲೈ 24 ರಂದು ಸಮನ್ಸ್ ಜಾರಿ ಮಾಡುವಾಗ ಸುಲಿಗೆ ಆರೋಪವನ್ನು ಕೈಬಿಟ್ಟಿತ್ತು. ಆದಾಗ್ಯೂ, ಕ್ರಿಮಿನಲ್ ಬೆದರಿಕೆಗಾಗಿ ಅಖ್ತರ್ ವಿರುದ್ಧ ಮುಂದುವರಿಯಲು ಸಾಕಷ್ಟು ಆಧಾರಗಳಿವೆ ಎಂದು ಹೇಳಿತ್ತು.

ಸಹನಟಿಯೊಂದಿಗಿನ ಆಕೆಯ ಸಾರ್ವಜನಿಕ ವಿವಾದದ ನಂತರ, ಗೀತರಚನೆಕಾರ ಅಖ್ತರ್ ನನ್ನನ್ನು ಮತ್ತು ಸಹೋದರಿ ರಂಗೋಲಿ ಚಾಂಡೆಲ್ ರನ್ನು “ದುಷ್ಕೃತ್ಯದ ಉದ್ದೇಶಗಳು ಮತ್ತು ದುರುದ್ದೇಶದಿಂದ ತನ್ನ ಮನೆಗೆ ಕರೆದರು ಮತ್ತು ನಂತರ ಕ್ರಿಮಿನಲ್ ರೀತಿ ಬೆದರಿಕೆ ಹಾಕಿದರು” ಎಂದು ದೂರಿನಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next