Advertisement

ಕಾರ್ತಿ ಸಿಎ ಭಾಸ್ಕರ ರಾಮನ್‌ ಜಾಮೀನು: ಆದೇಶ ಕಾದಿರಿಸಿದ ಕೋರ್ಟ್‌

04:22 PM Mar 01, 2018 | Team Udayavani |

ಹೊಸದಿಲ್ಲಿ : ಕಾರ್ತಿ ಚಿದಂಬರಂ ಅವರ ಚಾರ್ಟರ್ಡ್‌ ಅಕೌಂಟೆಂಟ್‌ ಎಸ್‌ ಭಾಸ್ಕರ ರಾಮನ್‌ ಸಲ್ಲಿಸಿರುವ ಜಾಮೀನು ಕೋರಿಕೆ ಅರ್ಜಿಯ ಮೇಲಿನ ತನ್ನ ಆದೇಶವನ್ನು ದಿಲ್ಲಿ ನ್ಯಾಯಾಲಯ ಕಾದಿರಿಸದೆ. 

Advertisement

ಸಿಎ ಭಾಸ್ಕರ ರಾಮನ್‌ ಅವರು ಕಾರ್ತಿ ಚಿದಂಬರಂ ಜತೆಗೆ ಐಎನ್‌ಎಕ್ಸ್‌ ಮೀಡಿಯಾ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದರು. 

ಕಸ್ಟಡಿಯಲ್ಲಿ ಪ್ರಶ್ನಿಸಲ್ಪಡುವುದಕ್ಕೆ ತಾನು ಬೇಕಾಗಿಲ್ಲ ಮತ್ತು ತನ್ನನ್ನು ಕಸ್ಟಡಿಯಲ್ಲಿ ಇರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾಸ್ಕರ ರಾಮನ್‌ ಜಾಮೀನು ಕೋರಿಕೆ ಅರ್ಜಿಯಲ್ಲಿ  ನಿವೇದಿಸಿಕೊಂಡಿದ್ದರು. 

ಭಾಸ್ಕರ ರಾಮನ್‌ ಅವರನ್ನು ದಿಲ್ಲಿಯಲ್ಲಿನ ಒಂದು ಪಂಚತಾರಾ ಹೊಟೇಲಿನಿಂದ ಫೆ.16ರಂದು ಬಂಧಿಸಲಾಗಿತ್ತು. ಇಡಿ ತನಿಖಾಧಿಕಾರಿಗಳಿಂದ ಕಸ್ಟಡಿಯಲ್ಲಿ ಪ್ರಶ್ನಿಸಲ್ಪಡುವ ಅವಧಿ ಮುಗಿದುದನ್ನು ಅನುಸರಿಸಿ ಅವರನ್ನು ಫೆ.26ರಂದು ಜೈಲಿಗೆ ಕಳುಹಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next