Advertisement

ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸ್‌: ನ.1ರ ವರೆಗೆ ಚಿದು,ಪುತ್ರ ಬಂಧನ ಇಲ್ಲ

11:29 AM Oct 08, 2018 | Team Udayavani |

ಹೊಸದಿಲ್ಲಿ : ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಏರ್‌ಸೆಲ್‌-ಮ್ಯಾಕ್ಸಿಸ್‌ ಕೇಸಿನಲ್ಲಿ ನ.1ರ ವರೆಗೆ ಬಂಧಿಸಲ್ಪಡದಂತೆ ದಿಲ್ಲಿ ಹೈಕೋರ್ಟ್‌ ಇಂದು ಸೋಮವಾರ ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಗೆ  ರಕ್ಷಣೆ ನೀಡಿದೆ. 

Advertisement

ಪ್ರಕರಣದ ವಿಚಾರಣೆಯನ್ನು ಮುಂದೂಡಲು ಸಿಬಿಐ ಮತ್ತು ಇಡಿ ಕೋರಿದ ಕಾರಣ ವಿಶೇಷ ಸಿಬಿಐ ನ್ಯಾಯಾಧೀಶ ಒ ಪಿ ಸಾಯಿನಿ ಅವರು ನ.1ಕ್ಕೆ ಮುಂದಿನ ವಿಚಾರಣಾ ದಿನಾಂಕವನ್ನು ಗೊತ್ತುಪಡಿಸಿದರು. 

ಚಿದಂಬರಂ ಅವರ ವಕೀಲರಾದ ಪಿ ಕೆ ದುಬೆ ಮತ್ತು ಅರ್ಷದೀಪ್‌ ಸಿಂಗ್‌ ಅವರು ಸಲ್ಲಿಸಿರುವ ಅರ್ಜಿಗಳ ಮೇಲಿನ ವಾದ ಮಂಡನೆಗೆ ಮತ್ತು ವಿಸ್ತೃತ ಉತ್ತರ ಸಲ್ಲಿಕೆಗೆ ತಮಗೆ ಕಾಲಾವಕಾಶ ಬೇಕೆಂದು ಸಿಬಿಐ ಮತ್ತು ಇಡಿ ಪರವಾಗಿ ಹಾಜರಿದ್ದ ಅಡಿಶನಲ್‌ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ನಿತೀಶ್‌ ರಾಣಾ ಅವರು ಕೋರಿಕೆ ಸಲ್ಲಿಸಿದುದನ್ನು ವಿಶೇಷ ನ್ಯಾಯಾಧೀಶ ಸಾಯಿನಿ ಪರಿಗಣಿಸಿ ವಿಚಾರಣೆಯನ್ನು ನ.1ಕ್ಕೆ ಮುಂದೂಡಿದರು. 

ಸಿಬಿಐ ಕಳೆದ ಜು.19ರಂದು ದಾಖಲಿಸಿರುವ ಚಾರ್ಜ್‌ ಶೀಟಿನಲ್ಲಿ ಚಿದಂಬರಂ ಮತ್ತು ಅವರ ಪುತ್ರನನ್ನು ಹೆಸರಿಸಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next