Advertisement

ಮದ್ರಾಸ್‌ “ಹೈ’ಜಡ್ಜ್ ಗಳಾಗಿ ದಂಪತಿ ಪ್ರಮಾಣ ಸ್ವೀಕಾರ

08:06 AM Dec 05, 2020 | mahesh |

ಚೆನ್ನೈ: ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನ್ಯಾ|ಮುರಳಿ ಶಂಕರ ಕುಪ್ಪುರಾಜು ಮತ್ತು ನ್ಯಾ| ತಮಿಳ್‌ಸೆಲ್ವಿ ಟಿ. ವಲಯಪಾಳಯಂ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಮಹತ್ವವೆಂದರೆ ಅವರಿಬ್ಬರು ಪತಿ-ಪತ್ನಿ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇಂಥ ಬೆಳವಣಿಗೆ ಎರಡನೆಯದ್ದಾಗಿದೆ. ಕಳೆದ ವರ್ಷ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ವಿವೇಕ್‌ ಪುರಿ ಮತ್ತು ಅರ್ಚನಾ ಪುರಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಇತಿಹಾಸ ನಿರ್ಮಿಸಿದ್ದರು.

Advertisement

ಹದಿಮೂರು ಮಹಿಳಾ ನ್ಯಾಯಮೂರ್ತಿಗಳು ಮದ್ರಾಸ್‌ ಹೈಕೋರ್ಟ್‌ನಲ್ಲಿ ಇರುವುದು ಮತ್ತೂಂದು ಪ್ರಧಾನ ವಿಚಾರ. ಗುರುವಾರ ನಾಲ್ವರು ನ್ಯಾಯಮೂರ್ತಿಗಳು ಪ್ರಮಾಣ ಸ್ವೀಕರಿಸಿದ ಬಳಿಕ ಈ ದಾಖಲೆ ನಿರ್ಮಾಣವಾಗಿದೆ. ಒಟ್ಟು ಎಂಟು ಮಂದಿ ನ್ಯಾಯಮೂರ್ತಿಗಳಾಗಿ ಪ್ರಮಾಣ ಸ್ವೀಕರಿಸಿ ದವರ ಪೈಕಿ ನ್ಯಾ|ಮುರಳಿ ಮತ್ತು ನ್ಯಾ| ತಮಿಳ್‌ಸೆಲ್ವಿ ಕಿರಿಯರು. ಮುಂದಿನ ಎರಡು ವರ್ಷಗಳಲ್ಲಿ ಅವರಿಬ್ಬರು ಪೂರ್ಣ ಪ್ರಮಾಣದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಲ್ಲಿ ನ್ಯಾಯಮೂರ್ತಿ ದಂಪತಿಗೆ ಹತ್ತು ವರ್ಷಗಳ ಸೇವಾವಧಿ ಹೈಕೋರ್ಟ್‌ನಲ್ಲಿ ಲಭಿಸಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next