Advertisement

Jaipur: ಎಸಿ ಸ್ಪೋಟದಿಂದ ಬೆಂಕಿ; ಉಸಿರುಗಟ್ಟಿ ದಂಪತಿ ಮೃತ್ಯು

11:45 AM Jun 16, 2024 | Team Udayavani |

ಜೈಪುರ: ಮನೆಯಲ್ಲಿ ಎಸಿ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ದಂಪತಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಶನಿವಾರ(ಜೂ.15 ರಂದು) ನಡೆದಿದೆ.

Advertisement

ಪ್ರವೀಣ್ ವರ್ಮಾ ಮತ್ತು ಅವರ ಪತ್ನಿ ರೇಣು ಮೃತರು. ಪ್ರವೀಣ್‌ ಇಂಟೀರಿಯರ್ ಡಿಸೈನರ್ ಆಗಿದ್ದರು. ರೇಣು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದರು.

ದಂಪತಿ ತನ್ನ ಕೋಣೆಯಲ್ಲಿ ಎಸಿ ಆನ್‌ ಮಾಡಿ ಮಲಗಿದ್ದರು. ಈ ವೇಳೆ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ತಗುಲಿ ಎಸಿ ಸ್ಫೋಟಗೊಂಡಿದೆ. ದಂಪತಿಗೆ ಹೊಗೆಯಿಂದಾಗಿ ಉಸಿರುಗಟ್ಟಲು ಶುರುವಾಗಿದೆ.

ಸ್ಥಳೀಯರು ಹೊಗೆ ನೋಡಿ ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮನೆಯ ಕಿಟಕಿಗಳನ್ನು ಒಡೆದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮನೆಯೊಳಗೆ ಪ್ರವೇಶಿಸಿದಾಗ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ದಂಪತಿ ಹಾಸಿಗೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ.

Advertisement

ದಂಪತಿಯ ಏಕೈಕ ಪುತ್ರ ಹರ್ಷಿತ್ ವರ್ಮಾ ಥಾಯ್ಲೆಂಡ್‌ನಲ್ಲಿ ವೈದ್ಯರಾಗಿದ್ದು, ಅಲ್ಲಿ ಅವರು ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಪೊಲೀಸರು ಅವರಿಗೆ ಮಾಹಿತಿ ನೀಡಿದ್ದು, ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next