Advertisement

ಮೋದಿ ಚಿಂತನೆಯಿಂದ ದೇಶ ಬಲಾಡ್ಯ:ಜೋಶಿ

04:54 PM Apr 02, 2019 | pallavi |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯಿಂದ ಭಾರತ ಆರ್ಥಿಕ ಕ್ಷೇತ್ರದಲ್ಲಿ 5ನೇ ದೊಡ್ಡ ದೇಶವಾಗಿ ಬೆಳೆದಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.

Advertisement

ಕಲಘಟಗಿಯ ನ್ಯಾಯಾಲಯ ಸಂಕೀರ್ಣ ದ ವಕೀಲರ ಸಂಘದಲ್ಲಿ ಚುನಾವಣೆ ಪ್ರಯುಕ್ತ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ತೀರಾ ಹದಗೆಟ್ಟಿದ್ದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ನೀತಿ, ಪರಿಶ್ರಮ ಹಾಗೂ ಪರಿಣಾಮಕಾರಿ ಯೋಜನೆಗಳಿಂದ ಇಂದು ಭಾರತ 5ನೇ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ಹೇಳಿದರು.

ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಶಿವನಗೌಡರ ಕಾರ್ಯದರ್ಶಿ ರವಿ ತೋಟಮಟಿ, ಎಸ್‌.ವಿ. ತೆಗ್ಗಿಹಳ್ಳಿ, ರಾಕೇಶ ಅಳಗವಾಡಿ, ಈರಣ್ಣ ಜಡಿ, ವಿ.ಆರ್‌. ಗಾಣಿಗೇರ ಇನ್ನಿತರರಿದ್ದರು.

ಕೇಶವ ಕುಂಜಕ್ಕೆ ಭೇಟಿ; ಹಿರಿಯರೊಂದಿಗೆ ಚರ್ಚೆ
ಹುಬ್ಬಳ್ಳಿ: ಸ್ಥಳೀಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಗೋಕುಲ ರಸ್ತೆಯಲ್ಲಿರುವ ಆರೆಸ್ಸೆಸ್‌ ಕಾರ್ಯಾಲಯ ಕೇಶವ ಕುಂಜಕ್ಕೆ ಭೇಟಿ ನೀಡಿ ಚುನಾವಣೆ ಕುರಿತು ಹಿರಿಯರೊಂದಿಗೆ ಚರ್ಚಿಸಿದರು.

ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಮಾತನಾಡಿ, ಪ್ರಹ್ಲಾದ ಜೋಶಿಯವರು ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಗಳು. ಕ್ಷೇತ್ರದ ಜನತೆ ಅವರನ್ನು ಒಪ್ಪಿಕೊಂಡಿದ್ದಾರೆ. ತಾಳ್ಮೆಯಿಂದ ಪ್ರಚಾರ ಕಾರ್ಯ ಮಾಡುವಂತೆ ಸಲಹೆ ನೀಡಿದರು.

Advertisement

ಸಂಘದ ಹರಿಬಾವೂ ವಜೆ, ವಿಜಯ ಮಹಾಂತೇಶ, ಕಾರ್ಯಾಲಯ ಪ್ರಮುಖರಾದ ಸುರೇಶ ರಾವ್‌, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಶಿವು ಕೃಷ್ಣಮೂರ್ತಿ ಮತ್ತು ಸಂಘದ ಹಿರಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next