Advertisement

ದೇಶಕ್ಕೆ ಶಾರ್ಟ್‌ಕಟ್ ರಾಜಕೀಯದ ಅಗತ್ಯವಿಲ್ಲ : ಪ್ರಧಾನಿ ನರೇಂದ್ರ ಮೋದಿ

02:41 PM Dec 11, 2022 | Team Udayavani |

ನಾಗ್ಪುರ : ದೇಶಕ್ಕೆ ಸುಸ್ಥಿರ ಅಭಿವೃದ್ಧಿಯ ಅಗತ್ಯವಿದೆಯೇ ಹೊರತು ಶಾರ್ಟ್‌ಕಟ್ ರಾಜಕೀಯವಲ್ಲ. ಹಿಂದಿನ ತೆರಿಗೆದಾರರ ಹಣ ಭ್ರಷ್ಟಾಚಾರ ಮತ್ತು ಮತಬ್ಯಾಂಕ್ ರಾಜಕಾರಣದಲ್ಲಿ ವ್ಯರ್ಥವಾಗುತ್ತಿತ್ತು, ಕೆಲವು ರಾಜಕೀಯ ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

75,000 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಎಂಟು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಮಾನವ ಸ್ಪರ್ಶದಿಂದ ಮಾಡಲಾಗಿದೆ.ಎಲ್ಲ ರಾಜ್ಯಗಳ ಒಗ್ಗಟ್ಟಿನ ಶಕ್ತಿ, ಪ್ರಗತಿ ಮತ್ತು ಅಭಿವೃದ್ಧಿಯ ಮೂಲಕ ಅಭಿವೃದ್ಧಿ ಹೊಂದಿದ ಭಾರತವು ರಿಯಾಲಿಟಿ ಆಗಬಹುದು. ನಾವು ಅಭಿವೃದ್ಧಿಯ ಕಡೆಗೆ ಸಂಕುಚಿತ ವಿಧಾನವನ್ನು ಹೊಂದಿದರೆ , ಅವಕಾಶಗಳೂ ಸೀಮಿತವಾಗಿರುತ್ತವೆ”ಎಂದರು.

“ಕಳೆದ ಎಂಟು ವರ್ಷಗಳಲ್ಲಿ, ನಾವು ‘ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ (ಎಲ್ಲರ ಪ್ರಯತ್ನಗಳು ಮತ್ತು ನಂಬಿಕೆಯೊಂದಿಗೆ) ಮೂಲಕ ಮನಸ್ಥಿತಿ ಮತ್ತು ವಿಧಾನವನ್ನು ಬದಲಾಯಿಸಿದ್ದೇವೆ. ನಾಗ್ಪುರದಲ್ಲಿ ಪ್ರಾರಂಭಿಸಲಾದ ಮತ್ತು ಉದ್ಘಾಟನೆಗೊಂಡ ಯೋಜನೆಗಳು ಅಭಿವೃದ್ಧಿಯ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತವೆ” ಎಂದರು.

”ಶಾರ್ಟ್‌ಕಟ್ ರಾಜಕೀಯದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಶಾರ್ಟ್‌ಕಟ್ ರಾಜಕಾರಣ ಮಾಡುವ, ತೆರಿಗೆದಾರರ ಹಣವನ್ನು ಲೂಟಿ ಮಾಡುವ ಮತ್ತು ಸುಳ್ಳು ಭರವಸೆಗಳ ಮೂಲಕ ಅಧಿಕಾರ ಹಿಡಿಯುವ ರಾಜಕಾರಣಿಗಳ ವಿರುದ್ಧ ಜನರು ಜಾಗರೂಕರಾಗಿರಬೇಕು” ಎಂದರು.

ನಾಗ್ಪುರ ಮತ್ತು ಶಿರಡಿ ನಡುವಿನ ಮಹಾಮಾರ್ಗ್ ಆಧುನಿಕ ರಸ್ತೆ ಯೋಜನೆಯನ್ನು ಉದ್ಘಾಟಿಸಿದರು. ಇದು ಮಹಾರಾಷ್ಟ್ರದ ಮತ್ತಷ್ಟು ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಪ್ರಧಾನಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next