Advertisement
ಜತೆಗೆ, ಮತದಾನದ ಹಂತಗಳನ್ನು ಆದಷ್ಟು ಕಡಿಮೆ ಮಾಡುವ ಮೂಲಕ ನೀತಿ ಸಂಹಿತೆಯು ಕಡಿಮೆ ಅವಧಿಗೆ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಸೋಮವಾರ ನಿವೃತ್ತ ಸಿಇಸಿಗಳೊಂದಿಗೆ ಚುನಾವಣಾ ಆಯೋಗ ನಡೆಸಿದ ದುಂಡುಮೇಜಿನ ಸಭೆಯಲ್ಲಿ ಇಂಥ ಸಲಹೆಗಳು ಹೇಳಿ ಬಂದವು. ಅಲ್ಲದೆ, ದ್ವೇಷಪೂರಿತ ಭಾಷಣಕ್ಕೆ ಕಡಿವಾಣ ಹಾಕುವ ಅಗತ್ಯದ ಕುರಿತೂ ಚರ್ಚಿಸಲಾಯಿತು. ಸಭೆಯಲ್ಲಿ ನಿವೃತ್ತ ಸಿಇಸಿಗಳಾದ ಎಂ.ಎಸ್. ಗಿಲ್, ಜೆ.ಎಂ. ಲಿಂಗೊ, ಟಿ.ಎಸ್. ಕೃಷ್ಣಮೂರ್ತಿ, ಬಿ.ಬಿ.ಟಂಡನ್, ಎಸ್.ವೈ. ಖುರೇಷಿ, ವಿ.ಎಸ್.ಸಂಪತ್, ಎಚ್.ಆರ್.ಬ್ರಹ್ಮ ಮತ್ತು ನಸೀಂ ಜೈದಿ ಹಾಗೂ ಮಾಜಿ ಚುನಾವಣಾ ಆಯುಕ್ತ ಜಿ.ವಿ.ಜಿ ಕೃಷ್ಣಮೂರ್ತಿ ಭಾಗಿಯಾಗಿದ್ದರು. Advertisement
ಗರಿಷ್ಠ ಸಂಖ್ಯೆ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಮತಗಳ ಎಣಿಸಿ
06:00 AM May 22, 2018 | |
Advertisement
Udayavani is now on Telegram. Click here to join our channel and stay updated with the latest news.