Advertisement

ವಾಂಖೆಡೆ ಮೆಚ್ಚುವಂತೆ ನಡೆಯುವೆ: ಆರ್ಯನ್‌ ಖಾನ್‌!

09:13 PM Oct 16, 2021 | Team Udayavani |

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ, ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಶನಿವಾರ, ಎನ್‌ಸಿಬಿ ಕಚೇರಿಯಲ್ಲಿ ಆಪ್ತ ಸಮಾಲೋಚನೆ ನಡೆಸಲಾಯಿತು.

Advertisement

ಈ ವೇಳೆ, ಆರ್ಯನ್‌ಗೆ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಲಾಯಿತು. ಅಧಿಕಾರಿಗಳು, ತಜ್ಞರು ನೀಡಿದ ಸಲಹೆ ಸ್ವೀಕರಿಸಿದ ಆರ್ಯನ್‌, ಮುಂದೆ ತನ್ನೆಲ್ಲಾ ದುಶ್ಚಟಗಳನ್ನು ಬಿಡುವುದಾಗಿ ವಾಗ್ಧಾನ ನೀಡಿದ್ದಾನೆ.

ಮುಂದಿನ ದಿನಗಳಲ್ಲಿ ತಾನು ಸಮಾಜದ ಬಡವರ, ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುವುದಾಗಿ ತಿಳಿಸಿದ್ದಾನೆ. ಜತೆಗೆ, ಡ್ರಗ್ಸ್‌ ಪ್ರಕರಣ ಭೇದಿಸಿರುವ ಎನ್‌ಸಿಬಿ ಪ್ರಾಂತೀಯ ಆಯುಕ್ತ ಸಮೀರ್‌ ವಾಂಖೆಡೆಯವರೇ ಮುಂದೊಂದು ದಿನ ತಮ್ಮನ್ನು ಮೆಚ್ಚಿಕೊಳ್ಳುವಂಥ ಕಾರ್ಯ ಮಾಡುವುದಾಗಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

 

Advertisement
Advertisement

Udayavani is now on Telegram. Click here to join our channel and stay updated with the latest news.

Next