Advertisement

Corruption, ಭ್ರಷ್ಟರ ರಕ್ಷಣೆ ಕಾಂಗ್ರೆಸ್‌ನ ಧ್ಯೇಯ: ಸತೀಶ್‌ ಕುಂಪಲ

11:35 PM Aug 19, 2024 | Team Udayavani |

ಮಂಗಳೂರು: ಸಿಎಂ ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಮುಡಾ ಹಗರಣದಲ್ಲಿ ಕಳಚಿ ಬಿದ್ದಿದೆ. ರಾಜ್ಯಪಾಲರು ಸಂವಿಧಾನದಲ್ಲಿನ ಸೂಕ್ತ ವಿಧಿಯನ್ವಯ ತನಿಖೆಗೆ ಅನುಮತಿ ನೀಡಿದ್ದನ್ನು ವಿರೋಧಿ ಸುವ ಭರದಲ್ಲಿ ಕಾಂಗ್ರೆಸಿಗರು ಸಂವಿಧಾನದ ಆಶಯ ಅಣಕಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಟೀಕಿಸಿದ್ದಾರೆ.

Advertisement

ಕಾಂಗ್ರೆಸ್‌ನ ಕೆಲ ಗೂಂಡಾ ಕಾರ್ಯಕರ್ತರು ಖಾಸಗಿ ಬಸ್‌ಗಳ ಮೇಲೆ ಕಲ್ಲು ತೂರಾಟದಂಥ ವಿಧ್ವಂಸಕ ಕಾರ್ಯವನ್ನು ಮಾಡಿ ಕಾನೂನನ್ನು ಕೈಗೆ ತ್ತಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಹಾಗೆಯೇ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ಬಾಂಗ್ಲಾದಲ್ಲಿ ಆಗಿರುವಂತೆ ರಾಜಭವನದ ಮೇಲೆ ದಾಳಿಯಾಗಲಿದೆ ಎಂಬಂತೆ ಮಾತನಾಡಿದ್ದಾರೆ. ಪೋಲಿಸ್‌ ಇಲಾಖೆ ಕೂಡಲೇ ಸ್ವಯಂ ದೂರು ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next