Advertisement

ಕೊರೊನಾ: ತುರ್ತು ಚಿಕಿತ್ಸೆಗೆ ಸಿದ್ಧ

03:20 PM Feb 10, 2020 | Suhan S |

ಕೊಳ್ಳೇಗಾಲ: ವಿಶ್ವದಲ್ಲಿ ಕೊರೊನಾ ವೈರಸ್‌ ಎಲ್ಲರನ್ನು ನಿದ್ದೆಗೆಡಿಸಿದೆ. ಈ ರೋಗಕ್ಕೆ ತುತ್ತಾದವರಿಗೆ ಸೂಕ್ತ ತುರ್ತುಚಿಕಿತ್ಸೆ ನೀಡಲು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕವನ್ನು ಸಿದ್ಧಪಡಿಸಲಾಗಿದೆ. ಮಹಾಮಾರಿ ಕೊರೊನಾ ವೈರಸ್‌ ನಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಇಲ್ಲದೇ ಮರಣ ಹೊಂದುತ್ತಿದ್ದಾರೆ. ಇದರಿಂದ ಜಗತ್ತೆ ಬೆಚ್ಚುಬಿದ್ದು, ಈ ಬಾಯಾನಕ ರೋಗ ಯಾರೀಗೂ ಬರಬಾರದು ಎಂದು ಸರ್ಕಾರ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಘಟಕ ಸಿದ್ಧಪಡಿಸಬೇಕು ಎಂದು ಆದೇಶ ನೀಡುತ್ತಿದ್ದಂತೆ, ಆಸ್ಪತ್ರೆಯಲ್ಲಿ ಘಟಕ ಸಿದ್ಧವಾಗಿದೆ.

Advertisement

ತಾಲೂಕು ವೈದ್ಯಾಧಿಕಾರಿ ಡಾ.ಗೋಪಾಲ್‌ ಮಾತನಾಡಿ, ಸರ್ಕಾರದ ಆದೇಶದಂತೆ ಘಟಕವನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ತಾಲೂಕು ಗಡಿ ಪ್ರದೇಶದಲ್ಲಿ ತಪಾಸಣೆ ಮಾಡಲಾಗುತ್ತಿದೆ. ತಾಲೂಕು ಕೇಂದ್ರಕ್ಕೆ ಕೊರೊನಾ ವೈರಸ್‌ ಹರಡದಂತೆ ಕಟ್ಟೆಚ್ಚರ ವಹಿ ಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next