Advertisement

ಕೊರೊನಾ ಜಾಗೃತಿ ಜಾಥಾ

10:31 PM Jan 06, 2022 | Team Udayavani |

ಸಿರುಗುಪ್ಪ: ಕೋವಿಡ್‌ ಮೂರನೇ ಅಲೆಯು ಓಮಿಕ್ರಾನ್‌ ರೂಪಾಂತರವಾಗಿ ಸಾರ್ವಜನಿಕರಿಗೆ ಹರಡುತ್ತಿದೆ ಎನ್ನುವ ವರದಿಯನ್ನು ತಜ್ಞರು ನೀಡಿದ್ದು ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಕೊರೊನಾ ನಿಯಮವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಹಶೀಲ್ದಾರ್‌ ಎನ್‌. ಆರ್‌. ಮಂಜುನಾಥಸ್ವಾಮಿ ತಿಳಿಸಿದರು.

Advertisement

ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ಜಾಗೃತಿ ಅಂಗವಾಗಿ ವಿದ್ಯಾರ್ಥಿಗಳಿಂದ ನಡೆದ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳು, ವಾಣಿಜ್ಯ ಮಳಿಗೆಗಳ ವರ್ತಕರು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊರೊನಾ ಹರಡದಂತೆ ತಡೆಯಲು ಸಾಧ್ಯವಿದೆ.

ನಿಮ್ಮ ಜೀವ ನಿಮ್ಮ ಕೈಯಲ್ಲಿದೆ. ಪ್ರತಿಯೊಬ್ಬರು ಲಸಿಕೆ ಪಡೆದು ಜೀವಹಾನಿ ತಪ್ಪಿಸಬೇಕೆಂದು ಕರೆ ನೀಡಿದರು. ನಗರದ ತಾಲೂಕು ಮೈದಾನದಿಂದ ಆರಂಭವಾದ ಜಾಥಾ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕಂದಾಯ ಅ ಧಿಕಾರಿ ವಿರುಪಾಕ್ಷಪ್ಪ, ಉಪನ್ಯಾಸಕ ವೆಂಕಟೇಶ ಮತ್ತು ವಿದ್ಯಾರ್ಥಿಗಳು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next