Advertisement

ಕೊತ್ತಂಬರಿ ಸೊಪ್ಪು ಜಾನುವಾರಗಳ ಪಾಲು

04:23 PM Mar 26, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ದಿಂದ ರೈತರು ಸಂಕಷ್ಟ ಎದುರಿಸುವಂತಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಇತ್ತೀಚೆಗೆ ಚೆಂಡು ಹೂವಿನ ತೋಟವನ್ನು ರೈತರೊಬ್ಬರು ನಾಶ ಪಡಿಸಿರುವ ಘಟನೆ ಹಸಿರಾಗಿ ಇರುವಾಗಲೇ ತಾಲೂಕಿನ ಹನುಮಂತಪುರ

Advertisement

ಗ್ರಾಮದಲ್ಲಿ ರೈತರಿಬ್ಬರು, ಕೊತ್ತಂಬರಿ ಸೊಪ್ಪನ್ನು ಜಾನುವಾರಗಳಿಗೆ ದಾನ ಮಾಡಿದ್ದಾರೆ. ಹೌದು, ಚಿಕ್ಕಬಳ್ಳಾಪುರ ತಾಲೂಕಿನ ಹನು ಮಂತಪುರ ಗ್ರಾಮದ ರೈತ ನಾರಾಯಣ ಸ್ವಾಮಿ ಹಾಗೂ ಚೆನ್ನಮ್ಮ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ, ಸಂಕಷ್ಟದಲ್ಲಿ ಸಿಲುಕಿ ಹೂಡಿ ಬ‌ಂಡವಾಳ ಕೈಗಟುಕದೆ ನಷ್ಟ ಅನುಭವಿಸಿ, ಮಾರುಕಟ್ಟೆಗೆ ತೆಗೆದು ಕೊಂಡರೆ ಕೊತ್ತಂಬರಿ ಸೊಪ್ಪು ಕೇಳುವರಿಲದಂತಾಗಿ ರೈತರು ಕೊತ್ತಂಬರಿ ಸೊಪ್ಪನ್ನು ಜಾನುವಾರಗಳಿಗೆ ದಾನ ಮಾಡಿದ್ದಾರೆ.

ಸೂಕ್ತ ನೀರಿನ ಕೊರತೆ: ಯಾವುದೇ ನದಿ ನಾಲೆಗಳಿಲ್ಲದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರೈತರು ಮಳೆ ನೀರನ್ನು ಮತ್ತು ಕೊಳವೆಬಾವಿಯನ್ನು ನೆಚ್ಚಿಕೊಂಡು ಕೃಷಿಯಲ್ಲಿತೊಡಗಿಸಿಕೊಂಡಿದ್ದಾರೆ. ಆದರೆ, ಕೊರೊ ನಾದಕರಿ ನೆರಳಿನಲ್ಲಿ ರೈತರಿಗೆ ಹೂಡಿದ್ದ ಬಂಡವಾಳ ಕೈಗಟುಕದೆ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಕೆಲವೊಂದು ಬೆಳೆಗಳಿಂದ ಅನುಕೂಲವಾದರೆ, ಇನ್ನು ಹಲವು ಬೆಳೆಗಳಿಂದ ನÐ ಅ‌r ನುಭವಿಸು ವಂತಾಗಿ ಯಾವ ಬೆಳೆ ಲಾಭದಾಯಕವಾಗಿದೆ ಎಂಬ ಚಿಂತೆ ರೈತರಿಗೆ ಕಾಡುತ್ತಿದೆ.

ಕೊತ್ತಂಬರಿ ಸೊಪ್ಪಿನಿಂದ ನಯಪೈಸೆ ಬಂದಿಲ್ಲ: ಒಂದು ಎಕರೆಯಲ್ಲಿ 50 ಸಾವಿರ ಖರ್ಚು ಮಾಡಿ, ಕೊತ್ತಂಬರಿ ಸೊಪ್ಪುಬೆಳೆಯಲಾಗಿತ್ತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 1 ಕಟ್ಟು ಕೊತ್ತಂಬರಿ ಸೊಪ್ಪು30ರಿಂದ 50 ರೂ.ಗಳಿಗೆ ಮಾರಾಟವಾಗುತ್ತಿತ್ತು.ಆದರೆ, 1 ಕಟ್ಟು 1 ರೂ.ಗೆ ಕೇಳುವವರಿಲ್ಲ. 20ಕೆಜಿ ಬಿತ್ತನೆ ಬೀಜ, ರಸಗೊಬ್ಬರ, ಟ್ಯಾಂಕರ್‌ಮೂಲಕ ನೀರು ಸರಬರಾಜು ಸಹಿತ ಇಷ್ಟುದಿನ ಶ್ರಮಪಟ್ಟು ಬೆಳೆಸಿದ ಕೊತ್ತಂಬರಿಸೊಪ್ಪಿನಿಂದ ನಯಪೈಸೆಯೂ ಆದಾಯಬಂದಿಲ್ಲ ಎಂದು ರೈತ ಮಹಿಳೆ ಚೆನ್ನಮ್ಮ ತಮ್ಮ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next