Advertisement

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

02:47 PM Jun 19, 2021 | Team Udayavani |

ತೆಕ್ಕಟ್ಟೆ : ಕೊರ್ಗಿ ದಿ|ಕೆ.ಚಂದ್ರಶೇಖರ ಹೆಗ್ಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಪುತ್ರ ಡಾ| ರವಿಶಂಕರ ಶೆಟ್ಟಿ ಅವರು ಸುಮಾರು 10ಲೀ ಸಾಮರ್ಥ್ಯದ ಆಮ್ಲಜನಕ ಸಾಂದ್ರಕವನ್ನು ಜೂ.19 ರಂದು ಕೊಡುಗೆಯಾಗಿ ನೀಡಿದರು.

Advertisement

ಕೊರ್ಗಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಗೌರೀಶ್‌ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಳಾವರ ಗ್ರಾಮ ಪಂಚಾಯತ್‌ ನ ಮಾಜಿ ಅಧ್ಯಕ್ಷ ಕೆ.ರಂಜಿತ್‌ ಕುಮಾರ್‌ ಶೆಟ್ಟಿ, ಪ್ರಭಾರ ಪೊಲೀಸ್‌ ಉಪಅಧೀಕ್ಷ ಕ ಲೋಕಾಯುಕ್ತ ಉಡುಪಿಯ ಜಯರಾಂ ಗೌಡ, ಪೊಲೀಸ್‌ ನಿರೀಕ್ಷಕ ರಾಜಶೇಖರ್‌, ಕೊರ್ಗಿ ದಿ|ಕೆ.ಚಂದ್ರಶೇಖರ ಹೆಗ್ಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರತಾಪ್‌. ಕೊರ್ಗಿ ಗ್ರಾ.ಪಂ.ಪಿಡಿಒ ಸುಧಾಕರ ಶೆಟ್ಟಿ ಗುಡ್ಡಮ್ಮಾಡಿ, ಆಶಾ ಕಾರ್ಯಕತೆ‌ìಯರು, ಆರೋಗ್ಯ ಸಿಬಂದಿಗಳು ಹಾಗೂ ಗ್ರಾ.ಪಂ. ಸಿಬಂದಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮನೆಗೊಂದು ಮರ , ಊರಿಗೊಂದು ವನ ಎನ್ನುವ ಶೀರ್ಷಿಕೆ ಅಡಿಯಲ್ಲಿ ಗ್ರಾಮಸ್ಥರಿಗೆ ಗಿಡ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next