Advertisement

Coordination: ಬಿಜೆಪಿ ಜತೆ ಭಿನ್ನಾಭಿಪ್ರಾಯ ನಿಜ: ಆರ್‌ಎಸ್‌ಎಸ್‌ ಒಪ್ಪಿಗೆ

01:20 AM Sep 03, 2024 | Team Udayavani |

ಹೊಸದಿಲ್ಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಧ್ಯೆ ಎಲ್ಲವೂ ಚೆನ್ನಾಗಿಲ್ಲ ಎಂಬ ಸುದ್ದಿಗಳಿಗೆ ಆರ್‌ಎಸ್‌ಎಸ್‌ ವಕ್ತಾರ ಸುನೀಲ್‌ ಅಂಬೇಕರ್‌ ಹೇಳಿಕೆ ಪುಷ್ಟಿ ನೀಡಿದೆ. “ಬಿಜೆಪಿ ಜತೆಗೆ ಕೆಲವೊಂದು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇದೆ. ಆದರೆ ಇದು “ಕುಟುಂಬದ ವಿಚಾರ. ಅದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುತ್ತೇವೆ’ ಎಂದೂ ಹೇಳಿದ್ದಾರೆ.

Advertisement

ಕೇರಳ ಪಾಲಕ್ಕಾಡ್‌ನ‌ಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಸಮನ್ವಯ ಬೈಠಕ್‌ನ ಕೊನೇ ದಿನ ಸೋಮ ವಾರ ಅಂಬೇಕರ್‌ ಈ ಕುರಿತು ಮಾತನಾಡಿದ್ದಾರೆ. ಜತೆಗೆ ಬಿಜೆಪಿಗೆ ಆರ್‌ಎಸ್‌ಎಸ್‌ ನೆರವು ಅಗತ್ಯವಿಲ್ಲವೆಂದು ಪಕ್ಷದ ಅಧ್ಯಕ್ಷ ನಡ್ಡಾ ಹೇಳಿದ್ದ ಬಗ್ಗೆ ಸಮಾವೇಶ ದಲ್ಲಿ ಚರ್ಚಿಸಲಾಗಿತ್ತು ಎಂದಿದ್ದಾರೆ.

ಕ್ರಮ ಕೈಗೊಳ್ಳಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆ ಬಗ್ಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಆ ದೇಶದ ಮಧ್ಯಾಂತರ ಸರಕಾರದ ಜತೆ ಮಾತುಕತೆ ನಡೆಸಬೇಕು. ಇದಲ್ಲದೆ ತಮಿಳುನಾಡಿನಲ್ಲಿ ಅವ್ಯಾಹತವಾಗಿ ಮತಾಂತರ ನಡೆಸಲಾಗುತ್ತಿದೆ ಎಂಬ ಆರೋಪಗಳಿವೆ. ಇದು ಕಳವಳಕಾರಿ ಎಂದು ಅಂಬೇಕರ್‌ ಹೇಳಿದ್ದಾರೆ. ಕೋಲ್ಕತಾ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ, ಹತ್ಯೆ ಘಟನೆಯನ್ನು ಆರ್‌ಎಸ್‌ಎಸ್‌ ಖಂಡಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next