Advertisement

ರೈತರ ಆದಾಯ ದುಪ್ಪಟ್ಟು ಮಾಡುವ ದಾರಿ ಹುಡುಕಿ

09:15 AM Sep 22, 2017 | Team Udayavani |

ಹೊಸದಿಲ್ಲಿ: 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವಂತಹ ಹೊಸ ಕೃಷಿ ಪದ್ಧತಿ, ಅವಕಾಶಗಳ ಕಡೆಗೆ ಸಹಕಾರಿ ವಲಯ ಹೆಚ್ಚು ಗಮನ ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ಸಹಕಾರಿ ಧುರೀಣ ಲಕ್ಷ್ಮಣ್‌ ಮಾಧವ್‌ ರಾವ್‌ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಜೇನು ಸಾಕಣೆ, ಕಡಲಕಳೆಯ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳುವಂತೆ ಮಾಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಕು. ಕೃಷಿ ವಲಯದಲ್ಲಿ ಇರುವ ವಿಫ‌ುಲ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು. ಸಹಕಾರಿ ವಲಯವನ್ನು ರಾಜಕೀಯದಿಂದ ದೂರವಿಟ್ಟು ಬಲಪಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next