Advertisement

ಯುವಕರಲ್ಲಿ ಸಹಬಾಳ್ವೆ-ನಾಯಕತ್ವ ಗುಣ ಅಗತ್ಯ: ಡಾ|ಸಿದ್ದಪ್ಪ

02:50 PM Jan 02, 2022 | Team Udayavani |

ಯಾದಗಿರಿ: ಎನ್ನೆಸ್ಸೆಸ್‌ ಮೂಲ ಉದ್ದೇಶ ಸ್ವಚ್ಛತೆ, ಸಾಕ್ಷರತೆ, ಆರೋಗ್ಯ ಹೀಗೆ ಮುಂತಾದ ವಿಷಯಗಳ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ ಹೇಳಿದರು.

Advertisement

ಇಲ್ಲಿನ ಲಿಂಗೇರಿ ಕೋನಪ್ಪ ಮಹಿಳಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ಎನ್‌ ಎಸ್‌ಎಸ್‌ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.

ಯುವಕರಲ್ಲಿ ಸಹಬಾಳ್ವೆ-ನಾಯಕತ್ವದ ಗುಣಗಳು ಬೆಳೆದಲ್ಲಿ ಗಾಂಧೀಜಿಯವರ ಕನಸು ನನಸಾಗುತ್ತದೆ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ| ದೇವಿಂದ್ರಪ್ಪ ಹಳಿಮನಿ ಮಾತನಾಡಿ, ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ದೇಶ ಸೇವೆ ಮನೋಭಾವ ಬೆಳೆಯುತ್ತದೆ ಎಂದರು.

ಪ್ರಾಂಶುಪಾಲ ಡಾ| ಶ್ರೀನಿವಾಸ ದೊಡ್ಮನಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿದರು. ಪ್ರಾಂಶುಪಾಲ ಗುರಪ್ಪಾಚಾರ್ಯ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ಸಂಯೋಜನಾಧಿಕಾರಿ ಸತೀಶ್‌ ಕುಮಾರ ಹವಲ್ದಾರ್‌, ಸುರೇಶ್‌ ಮಠ, ಬಸವರಾಜ ಜುಗೇರಿ, ಡಾ| ವೆಂಕಟೇಶ್‌ ಕಲಾಲ್‌, ದೇವೀಂದ್ರಪ್ಪ, ಗೀತಾ ಪಾಟೀಲ್‌, ಮಂಗಳಾ, ಸುಧಾ, ಸವಿತಾ, ವೈಶಾಲಿ, ರಾಜೇಶ್ವರಿ, ಸುಷ್ಮಾ ಕುಲಕರ್ಣಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next