Advertisement

ಸ್ವಚ್ಛತೆಗಾಗಿ ನಗರಸಭೆಯೊಂದಿಗೆ ಸಹಕರಿಸಿ

01:07 PM Jan 07, 2020 | Suhan S |

ಹೊಸಕೋಟೆ : ನಗರದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಬೀದಿ ಬದಿ ವ್ಯಾಪಾರಿಗಳು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪೌರಾಯುಕ್ತ ನಿಸಾರ್‌ ಅಹಮದ್‌ ಮನವಿ ಮಾಡಿದರು.

Advertisement

ಸರಕಾರದ ಸೂಚನೆಯಂತೆ ರಚಿಸಿರುವ ಸಮಿತಿಯ ಸದಸ್ಯರು ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾಯೋಜನೆ ತಯಾರಿಸುವಲ್ಲಿ ಸೂಕ್ತ ಸಲಹೆಗಳನ್ನು ನೀಡಬೇಕು. ಇಲಾಖೆ ಜಾರಿಗೊಳಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸುಗಮವಾದ ವಾಹನ ಸಂಚಾರ, ಪಾದಚಾರಿಗಳ ಓಡಾಟಕ್ಕೆ ಅಡಚಣೆಯಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.

ಸಮಿತಿಯ ಸದಸ್ಯರು: ಸಮಿತಿ ಸದಸ್ಯರುಗಳಾಗಿ ಆಯ್ಕೆಯಾಗಿರುವ ಎನ್‌. ಶಂಕರಪ್ಪ, ರವಿ, ಎಚ್‌. ಜೆ. ಆನಂದ್‌ಸಿಂಗ್‌, ಸಿ. ರಾಜ, ಮಂಜುಳ, ವರಲಕ್ಷ್ಮಿ, ಪ್ರತಿಭಾ, ನಿರಂಜನಿ, ಬಾಬು, ರವಿ, ಆರೀಫ್ರವರುಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಮಂಗಮ್ಮ, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಎ. ಜಯರಾಮ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next