Advertisement

Cooker ಕೇಳಿದ ವೃದ್ದೆ ಮೇಲೆ ಹಲ್ಲೆ: ಸಂಭಾಷಣೆ ವಿಡಿಯೋ ವೈರಲ್; ದೂರು ದಾಖಲು

06:25 PM Mar 20, 2024 | Team Udayavani |

ಕುಣಿಗಲ್: ಕುಕ್ಕರ್‌ ಕೇಳಿದ ವೃದ್ಧೆ ಮೇಲೆ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ.

Advertisement

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವೃದ್ದೆ ಮಾತನಾಡಿರುವ ವಿಡಿಯೋ ವೈರೆಲ್ ಆಗಿದ್ದು, ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜಿನಿ ಗ್ರಾಮದ ಗಂಗಮ್ಮ (75), ಕಾಂಗ್ರೆಸ್ ಮುಖಂಡ ನಾರಾಯಣ್‌ನಿಂದ ಹಲ್ಲೆಗೆ ಒಳಗಾದ ವೃದ್ದೆ.

ಹಲ್ಲೆಗೆ ಒಳಗಾದ ಗಂಗಮ್ಮ ಅವರು ಬೇರೊಂದು ಮಹಿಳೆಯೊಂದಿಗೆ ಮೊಬೈಲ್ ಮೂಲಕ, ಘಟನೆ ವಿಚಾರ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನಿದು ಘಟನೆ : ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತ ನಾರಾಯಣ್ ಕುಕ್ಕರ್ ಸೆಟ್‌ಗಳನ್ನು ಗ್ರಾಮದಲ್ಲಿ ವಿತರಿಸುತ್ತಿದ್ದರು ಎನ್ನಲಾಗಿದೆ. ಗಂಗಮ್ಮನಿಗೆ ಕುಕ್ಕರ್‌ ಸಿಕ್ಕಿರಲಿಲ್ಲ. ಹೀಗಾಗಿ ಆಕೆ, “ಎಲ್ಲರಿಗೂ ಕುಕ್ಕರ್‌ ಕೊಟ್ಟಿದ್ದೀಯ, ನನಗೆ ಏಕೆ ಕೊಟ್ಟಿಲ್ಲ’ ಎಂದು ಪ್ರಶ್ನಿಸಿದ್ದಾರೆ. “ನೀನು ನನಗೆ ಬೈದಿರುವೆ. ಹೀಗಾಗಿ ನಿನಗೆ ಕುಕ್ಕರ್‌ ಕೊಡುವುದಿಲ್ಲ’ ಎಂದು ನಾರಾಯಣ್‌ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, “ನಾರಾಯಣ್‌ ನನ್ನನ್ನು ಹಿಡಿದುಕೊಂಡು ಹೊಡೆದು, ಕೈಯಲ್ಲಿ ಇದ್ದ ಬಳೆ, ಕಿವಿ ಓಲೆಯನ್ನು ಮುರಿದಿದ್ದಾನೆ’ ಎಂದು ವೃದ್ಧೆ ದೂರು ದಾಖಲಿಸಿದ್ದಾರೆ. ಈ ಘಟನೆಯನ್ನು ವಿವರವನ್ನು ಮಹಿಳೆಯೊಬ್ಬರ ಜತೆ ವೃದ್ಧೆ ಫೋನ್‌ ಮೂಲಕ ಹಂಚಿಕೊಂಡಿದ್ದು, ಇದು ವೈರಲ್‌ ಆಗಿದೆ. ವೃದ್ದೆ ಮಹಿಳೆ ಹುಲಿಯೂರುದುರ್ಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ಸಂಬಂಧ ವೃದ್ದೆ ಮಹಿಳೆ ದೂರು ನೀಡಿದ್ದಾರೆ, ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ದ ಎನ್‌ಸಿಆರ್ ಮಾಡಿದ್ದು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುವುದು.
-ಪ್ರಶಾಂತ್
ಹುಲಿಯೂರುದುರ್ಗ ಪಿಎಸ್‌ಐ

Advertisement
Advertisement

Udayavani is now on Telegram. Click here to join our channel and stay updated with the latest news.

Next