Advertisement

ಕೂಚ್‌ ಬೆಹಾರ್‌ ಕಪ್‌: ಮತ್ತೂಮ್ಮೆ ಅರ್ಜುನ್‌ ತೆಂಡುಲ್ಕರ್‌ 5 ವಿಕೆಟ್‌

06:45 AM Nov 23, 2018 | |

ನವದೆಹಲಿ: ಕೂಚ್‌ ಬೆಹಾರ್‌ ಕಪ್‌ 19 ವರ್ಷ ವಯೋಮಿತಿಯೊಳಗಿನ ಕ್ರಿಕೆಟ್‌ ಕೂಟದ ದಿಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಅರ್ಜುನ್‌ ತೆಂಡುಲ್ಕರ್‌ 98ಕ್ಕೆ5 ವಿಕೆಟ್‌ ಕಬಳಿಸಿ ಮತ್ತೂಮ್ಮೆ ಸುದ್ದಿಯಾಗಿದ್ದಾರೆ. 

Advertisement

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ಕಳೆದ ತಿಂಗಳು ವಿನೂ ಮಂಕಡ್‌ ಕ್ರಿಕೆಟ್‌ ಪಂದ್ಯದಲ್ಲಿ ಗುಜರಾತ್‌ ವಿರುದ್ಧ 30ಕ್ಕೆ 5 ವಿಕೆಟ್‌ ಕಬಳಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಇದೀಗ ಕೂಚ್‌ ಬೆಹಾರ್‌ ಕೂಟದಲ್ಲೂ ಅದೇ ಪ್ರದರ್ಶನವನ್ನು ಅರ್ಜುನ್‌ ಮುಂದುವರಿಸಿದ್ದಾರೆ. 

ಫಿರೋಜ್‌ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಿಲ್ಲಿ ಮಧ್ಯಮ ಕ್ರಮಾಂಕವನ್ನು ಅರ್ಜುನ್‌ ನುಚ್ಚು ನೂರು ಮಾಡಿದರು. ಪರಿಣಾಮ ದಿನದ ಆಟ ಮುಗಿದ ವೇಳೆ ದಿಲ್ಲಿ 9 ವಿಕೆಟ್‌ಗೆ 394 ರನ್‌ಗಳಿಸಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ಯೂತ್‌ ಟೆಸ್ಟ್‌ನಲ್ಲಿ ಅರ್ಜುನ್‌ 19 ವರ್ಷ ವಯೋಮಿತಿಯೊಳಗಿನ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅಲ್ಲಿ ಕಳಪೆ ಪ್ರದರ್ಶನ ಕಂಡಿದ್ದರು. ಇದರಿಂದ ಸಾಕಷ್ಟು ಟೀಕೆಗೂ ಒಳಗಾಗಿದ್ದರು. ಇದಾದ ಬಳಿಕ ಅರ್ಜುನ್‌ ಆಡಿದ ಎಲ್ಲ ಪಂದ್ಯಗಳಲ್ಲೂ ಮಿಂಚುತ್ತಿದ್ದಾರೆ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next