Advertisement

ಎಸ್‌ಡಿಎಮ್‌ ಘಟಿಕೋತ್ಸವ: ಭಾನುಪ್ರಿಯಾಗೆ ಚಿನ್ನದ ಪದಕ

09:37 PM Jul 18, 2021 | Team Udayavani |

ಧಾರವಾಡ: ಎಸ್‌ಡಿಎಂ ಎಂಜಿನಿ ಯರಿಂಗ್‌ ಕಾಲೇಜಿನಲ್ಲಿ ನಡೆದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ 2019-20ನೇ ಸಾಲಿನ ಎಂ.ಟೆಕ್‌ ಸಿವಿಲ್‌ ವಿಭಾಗದಲ್ಲಿ 9.95 ಸಿಜಿಪಿಎ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದ ಭಾನುಪ್ರಿಯಾ ಎಸ್‌. ನಾಗಾ ಅವರು ಡಾ| ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪಡೆದಿದ್ದಾರೆ.

Advertisement

ಎಸ್‌ಡಿಎಂ ಸೊಸೈಟಿಯ ಕಾರ್ಯದರ್ಶಿ ಜೀವಂಧರ ಕುಮಾರ ಅವರು ಚಿನ್ನದ ಪದಕ ಪ್ರದಾನ ಮಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಕೆ. ಗೋಪಿನಾಥ, ಸಿವಿಲ್‌ ವಿಭಾಗದ ಮುಖ್ಯಸ್ಥ ಡಾ| ಉದಯಶಂಕರ ಹಕ್ಕಾರೆ ಇದ್ದರು.

ವಿದ್ಯಾರ್ಥಿನಿ ಸಾಧನೆಗೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂ ದಿ ಹರ್ಷ ವ್ಯಕ್ತಪಡಿಸಿದ್ದಾರೆ. ಭಾನುಪ್ರಿಯಾ ಅವರ ತಂದೆ ಎಸ್‌.ನಾಗಾ ಅವರು ಮಗಳ ಕಾಲೇಜಿನಲ್ಲೇ ಶಿಕ್ಷಕೇತರ ಸಿಬ್ಬಂದಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next