Advertisement

ಮತಾಂತರ ಮುಕ್ತ ಭಾರತ ಮಾಡಿ

03:43 PM Apr 08, 2017 | |

ಕಾಳಗಿ: ಪ್ರೀತಿಯ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಮೋಸ ಮಾಡಿ ಮತಾಂತರ ಮಾಡಲಾಗುತ್ತಿದೆ. ಯುವಕ-ಯುವತಿಯರು ಎಚ್ಚೆತ್ತು ಲವ್‌ ಜಿಹಾದ, ಮತಾಂತರ ಮುಕ್ತ ಭಾರತ ಮಾಡಲು ಪಣತೋಡಬೇಕು ಎಂದು ದಕ್ಷೀಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲಜಿ ಕರೆ ನೀಡಿದರು. 

Advertisement

ವಿಶ್ವ ಹಿಂದು ಪರಿಷತ್‌ ವತಿಯಿಂದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಮ ನವಮಿ ಉತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶ್ರೀ ರಾಮ ವ್ಯಕ್ತಿ ಮಾತ್ರ ಅಲ್ಲ ಶಕ್ತಿ. ಅವನ ಆದರ್ಶವನ್ನು ಎಲ್ಲರೂ ಪಾಲಿಸಬೇಕು.

ಇಡೀ ರಾಷ್ಟ್ರವೇ ಒಂದು ಎನ್ನುವ ಸಂದೇಶ ಸಾರಲು ರಾಮನ ಜನ್ಮ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ಎಲ್ಲ ಹಿಂದುಗಳು ಒಗ್ಗಟ್ಟಾಗಿ ಸರ್ಕಾರಕ್ಕೆ ಒತ್ತಡ ತರಬೇಕು ಎಂದರು. ದೇಶದಲ್ಲಿ ಮಹಾ ಪುರುಷರ ಜಯಂತಿ ಮಾತ್ರ ಆಚರಣೆ ಮಾಡಬೇಕು.

ಟಿಪ್ಪು ಸುಲ್ತಾನ ಅವರಂತ ನರಹಂತಕರ ಜಯಂತಿ ಆಚರಣೆ ಮಾಡಬಾರದು ಎಂದು ಹೇಳಿದರು. ಸೂಗೂರನ ಪೂಜ್ಯ ಶಿವಾನಂದ ದೇವರು ಮಾತನಾಡಿ, ರಾಮ ನವಮಿ ಬರೀ ಕುಣಿದು ಕುಪ್ಪಳಿಸಿ ಮಜಾ ಮಾಡಿದರೆ ಆಚರಣೆಗೆ ಅರ್ಥವಿರುವುದಿಲ್ಲ. ರಾಮನ ಆದರ್ಶ ತತ್ವಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಇನ್ನೊಬ್ಬರಿಗೆ ಮಾದರಿ ವ್ಯಕ್ತಿಯಾಗಬೇಕು ಎಂದರು. 

ಹಿರೇಮಠದ ಪೂಜ್ಯ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಅಂಬೇಡ್ಕರ್‌ ವೃತ್ತದಿಂದ ಪ್ರಾರಂಭವಾದ 11ಅಡಿ ಎತ್ತರದ ರಾಮನ ಮೂರ್ತಿಯ ಬೃಹತ್‌ ಮೆರವಣಿಗೆ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿತು. 

Advertisement

ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ಸುಭಾಷ ಕಾಂಬಳೆ, ಕಾಳಗಿ ತಾಲೂಕಾಧ್ಯಕ್ಷ ಪುರುಷೋತ್ತಮ ಗುತ್ತೇದಾರ, ಚಿತ್ತಾಪುರ ತಾಲೂಕಾಧ್ಯಕ್ಷ ಅಶ್ವತ್ಥ್ರಾಮ ರಾಠೊಡ, ಶರಣಗೌಡ ಪೊಲೀಸ್‌ ಪಾಟೀಲ, ಶಿವಶರಣಪ್ಪ ಕಮಲಾಪುರ, ರಾಘವೇಂದ್ರ ಗುತ್ತೇದಾರ, ಜಗನ್ನಾಥ ಚಂದನಕೇರಿ, ಅಂಬರೀಷ ಸುಲೆಗಾಂವ, 

ಮಂಜುನಾಥ ಹೆಬ್ಟಾಳ, ಹನುಮಂತಪ್ಪ ಕಾಂತಿ, ಭೀಮಸಿಂಗ್‌ ರಜಪೂತ ಇದ್ದರು. ಚಿತ್ರಶೇಖರ ದಂಡೋತಿ ಸ್ವಾಗತಿಸಿದರು, ವೀವೇಕ ಗುತ್ತೇದಾರ ದೇಶಭಕ್ತಿ ಗೀತೆ ಹಾಡಿದರು, ಸೂರ್ಯಕಾಂತ ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು, ಶಿವಕುಮಾರ ಶಾಸ್ತ್ರಿ ನಿರೂಪಿಸಿದರು, ಶಿವಶರಣಪ್ಪ ಮಾಕಪನೋರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next