Advertisement

ತುಮಕೂರು: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಅರ್ಚಕ ಮರಳಿ ಸ್ವಧರ್ಮಕ್ಕೆ

04:23 PM Aug 22, 2022 | Team Udayavani |

ತುಮಕೂರು: ತಾಲೂಕಿನ ಊರ್ಡಿಗೆರೆ ಹೋಬಳಿಯ ಹಿರೇಹಳ್ಳಿಯಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಅರ್ಚಕ ಎಚ್‌.ಆರ್‌.ಚಂದ್ರಶೇಖರಯ್ಯ ಅವರನ್ನು ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಮನವೊಲಿಸಿ ಪುನಃ ಸ್ವಧರ್ಮಕ್ಕೆ ಕರೆ ತಂದಿದ್ದಾರೆ.

Advertisement

ಚಂದ್ರಶೇಖರಯ್ಯ ಹಿರೇಹಳ್ಳಿ ದೇವಾಲಯದ ಅರ್ಚಕ ರಾಗಿದ್ದರು. ತಮ್ಮ ವೈಯಕ್ತಿಕ ಸಮಸ್ಯೆಗಳು ಅವರನ್ನು ನಾನಾ ಸಂಧಿಗ್ಧತೆಗೆ ಒಳ ಮಾಡಿದ್ದರಿಂದ ಬೇಸರಗೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ನಿರ್ಧಾರ ಕೈಗೊಂಡಿದ್ದರು.ನಂತರ ಮಸೀದಿಯಲ್ಲಿ ತಮ್ಮ ಹೆಸರನ್ನು ಮುಬಾರಕ್‌ ಪಾಷ ಎಂದು ನಾಮಕರಣ ಮಾಡಿಕೊಂಡಿದ್ದರು. ಸ್ಥಳೀಯ ಪತ್ರಿಕೆಯಲ್ಲಿ ತಮ್ಮ ಹೆಸರು ಬದಲಾಯಿಸಿ ಕೊಳ್ಳುವ ಬಗ್ಗೆ ನೀಡಿದ್ದ ಜಾಹೀರಾತು ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ತಿಳಿದಿದ್ದು, ಕಾರ್ಯ ಪ್ರವೃತ್ತರಾದ ಶಿವಣ್ಣ ಚಂದ್ರಶೇಖರಯ್ಯ ಅವರ ಹಿರೇಹಳ್ಳಿಗೆ ಹೋಗಿ ಅವರ ಮನೆಯಲ್ಲಿ ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು.

ಹಿಂದೂ ಧರ್ಮದಲ್ಲಿ ನಿನಗೇನು ಸಮಸ್ಯೆ ಇದೆ ಎಂಬುದು ತಿಳಿಸು, ನಾನೇ ಮುಂದೆ ನಿಂತು ಪರಿ ಹರಿಸುತ್ತೇನೆ ಎಂದ ಅವರು, ನಂತರ ತಮ್ಮ ಕಚೇರಿಗೆ ಕರೆಸಿಕೊಂಡು ಮಾತನಾಡಿ ಧೈರ್ಯ ಹೇಳಿ ಮನಸ್ಸು ಬದಲಾಯಿಸಿದರು.

ಸೊಗಡು ಶಿವಣ್ಣರ ಮಾತಿಗೆ ಮನ್ನಣೆ ನೀಡಿ ಮತ್ತೆ ಹಿಂದೂ ಧರ್ಮಕ್ಕೆ ಬಂದರ ನನ್ನ ವೈಯಕ್ತಿಕ ಕಾರಣದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೆ. ಮಾಜಿ ಸಚಿವರಾದ ಎಸ್‌.ಶಿವಣ್ಣ ಅವರು ಹೇಳಿದ ಮಾತುಗಳಿಂದ ನಾನು ಮತ್ತೆ ನಮ್ಮ ಧರ್ಮಕ್ಕೆ ಬಂದಿದ್ದೇನೆ. ನನಗೆ ಈಗ ಸಂತೋಷವಾಗಿದೆ. – ಎಚ್‌.ಆರ್‌.ಚಂದ್ರಶೇಖರಯ್ಯ, ಅರ್ಚಕ

ಹಿಂದೂ ಧರ್ಮದಿಂದ ಮುಸ್ಲಿಂ, ಕ್ರೆçಸ್ತ ಧರ್ಮಕ್ಕೆ ಮತಾಂತರವಾಗುವುದು ನಡೆಯುತ್ತಿದ್ದು, ಇದು ನಿಲ್ಲಬೇಕು. ಮತಾಂತರಗೊಂಡಿದ್ದ ಚಂದ್ರಶೇಖರಯ್ಯಗೆ ಬುದ್ಧಿ ಹೇಳಿ ಮತ್ತೆ ನಮ್ಮ ಧರ್ಮಕ್ಕೆ ಕರೆ ತಂದಿ ದ್ದೇನೆ. ಈಗ ಆತ ಮತ್ತು ಕುಟುಂಬ ಸಂತಸಗೊಂಡಿದೆ. ಸರ್ಕಾರ ಮತಾಂತರಕ್ಕೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೊಗಡು ಎಸ್‌.ಶಿವಣ್ಣ, ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next