Advertisement

2ನೇ ಮದುವೆಗಾಗಿ ಮತಾಂತರ

11:18 PM Oct 14, 2019 | Team Udayavani |

ಮುಂಬೈ: ಪಿಎಂಸಿ ಬ್ಯಾಂಕ್‌ ಹಗರಣದ ಆರೋಪಿಗಳಿಗೆ ಸಂಬಂಧಿಸಿ ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಪ್ರಕರಣ ಸಂಬಂಧ ಅಮಾನತುಗೊಂಡಿರುವ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಥಾಮಸ್‌, ಇಸ್ಲಾಂಗೆ ಮತಾಂತರವಾಗಿ 2ನೇ ಮದುವೆಯಾಗಿರುವ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಥಾಮಸ್‌ಗೆ ಮೊದಲೇ ಮದುವೆಯಾಗಿತ್ತು. ಆದರೂ, ತಮ್ಮ ಆಪ್ತ ಸಹಾಯಕಿಯನ್ನು ಪ್ರೀತಿಸು ತ್ತಿದ್ದ ಅವರು, 2005ರಲ್ಲಿ ತಮ್ಮ ಹೆಸರನ್ನು ಜುನೈದ್‌ ಎಂದು ಬದ ಲಾಯಿಸಿಕೊಂಡು ಆಕೆಯನ್ನು ವಿವಾಹವಾಗಿದ್ದರು. ಅಲ್ಲದೆ, ಆಕೆಯ ಹೆಸರಿನಲ್ಲಿ ಪುಣೆಯಲ್ಲಿ 4 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದರು.

Advertisement

ವಿತ್‌ಡ್ರಾ ಮಿತಿ ಏರಿಕೆ: ಈ ನಡುವೆ, ಪಿಎಂಸಿ ಬ್ಯಾಂಕ್‌ನ ಗ್ರಾಹಕರಿಗೆ ನಗದು ವಿತ್‌ಡ್ರಾ ಮೇಲೆ ಹೇರಲಾಗಿದ್ದ ಮಿತಿಯನ್ನು ಆರ್‌ಬಿಐ ಸೋಮವಾರ 40 ಸಾವಿರ ರೂ.ಗೆ ಏರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next