Advertisement

Controversy; ಮಹಾತ್ಮ ಗಾಂಧೀಜಿಯವರು ಹುಟ್ಟಿನಿಂದ ಮುಸಲ್ಮಾನ: ಸಂಭಾಜಿ ಭಿಡೆ

04:57 PM Aug 25, 2023 | Team Udayavani |

ಪಣಜಿ: ಮಹಾತ್ಮ ಗಾಂಧೀಜಿಯವರು ಹುಟ್ಟಿನಿಂದ ಮುಸಲ್ಮಾನರಾಗಿದ್ದರಿಂದ ಅವರಿಗೆ ಮುಸಲ್ಮಾನರ ಅನುಯಾಯಿಗಳಿದ್ದರು ಎಂದು ಶಿವ ಪ್ರತಿಷ್ಠಾನ ಹಿಂದೂಸ್ಥಾನ್ ಸಂಸ್ಥಾಪಕ ಸಂಭಾಜಿ ಭಿಡೆ ಅವರು ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Advertisement

ಗೋವಾದ ಮಡಗಾಂವ್ ಧವರ್ಲಿಯ ಸಮರ್ಥಗಡದಲ್ಲಿ ಅಖಿಲ ಗೋಮಾಂತಕ ಹಿಂದೂ ಧರ್ಮಸಭಾ ಆಯೋಜಿಸಿದ್ದ ಉಪನ್ಯಾಸದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಭಾರತದ ರಾಷ್ಟ್ರಧ್ವಜವು ಕೇಸರಿ ಬಣ್ಣದ್ದಾಗಿರಬೇಕು ಎಂದಿದ್ದಾರೆ.

ಭಾರತದ ರಾಷ್ಟ್ರಧ್ವಜ ಕೇಸರಿಯಾಗಿರಬೇಕು ಎಂದು ದೇಶಾದ್ಯಂತ ಸಂಚರಿಸಿ ಪ್ರಚಾರ ಮಾಡುತ್ತೇನೆ, ಗೋವಾದಲ್ಲೂ ಇದೇ ರೀತಿಯ ಪ್ರಯತ್ನಗಳನ್ನು ಮಾಡಬೇಕು, ಯುವಕರು ಒಗ್ಗೂಡಬೇಕು ಎಂದು ಕರೆ ನೀಡಿದರು.

ಛತ್ರಪತಿ ಶಿವಾಜಿ ಮಹಾರಾಜರು ತಮ್ಮ 35 ವರ್ಷಗಳ ಅಧಿಕಾರಾವಧಿಯಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಮತ್ತು ಉತ್ತೇಜಿಸಲು 289 ಸಣ್ಣ ಮತ್ತು ದೊಡ್ಡ ಯುದ್ಧಗಳನ್ನು ನಡೆಸಿದರು. ಪ್ರಪಂಚದ 52 ಮುಸ್ಲಿಂ ರಾಷ್ಟ್ರಗಳಲ್ಲಿ 39 ದೇಶಗಳು ಭಾರತವನ್ನು ಆಕ್ರಮಿಸಿಕೊಂಡವು. ದುಷ್ಕೃತ್ಯಗಳು ನಡೆದಿದ್ದು, ಇದೀಗ ಚೀನಾ ಕೂಡ ದಾಳಿಗೆ ಸಿದ್ಧವಾಗಿದೆ ಎಂದರು.

ಕ್ರಿಶ್ಚಿಯನ್ ಸಮುದಾಯದ ಜನರು ಶಿವನ ವಿಗ್ರಹಗಳನ್ನು ಧ್ವಂಸಗೊಳಿಸುತ್ತಾರೆ ಮತ್ತು ಹಿಂದೂಗಳು ತೆರೆದ ಕಣ್ಣುಗಳಿಂದ ನೋಡುತ್ತಾರೆ. ಹಿಂದೂಗಳು ತುಂಬಾ ಸಹನಶೀಲರಾಗಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next