Advertisement

ಶೇ. 40 ಕಮಿಷನ್‌ ತನಿಖೆಗೆ ನಿವೃತ್ತ ನ್ಯಾ|ಸಮಿತಿ ರಚಿಸಿ

10:42 AM Apr 26, 2022 | Team Udayavani |

ಬೆಂಗಳೂರು: ಕಾಮಗಾರಿಗಳನ್ನು ಟೆಂಡರ್‌ ನೀಡುವಾಗ ಪ್ಯಾಕೇಜ್‌ ವ್ಯವಸ್ಥೆ ರದ್ದುಗೊಳಿಸಬೇಕು, 50 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತದ ಕಾಮಗಾರಿಗಳ ಮೇಲೆ ನಿಗಾ ವಹಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಬೇಕು ಎಂದು ಕರ್ನಾಟಕ ಸ್ಟೇಟ್‌ ಕಂಟ್ರಾಕ್ಟರ್‌ ಅಸೋಸಿಯೇಷನ್‌ನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

Advertisement

ರಾಜ್ಯದಲ್ಲಿ 40 ಪರ್ಸೆಂಟ್‌ ಹಗರಣದ ಆರೋಪ ಕೇಳಿ ಬಂದ ಅನಂತರ ಸೋಮವಾರ ಮುಖ್ಯಮಂತ್ರಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ಪ್ರಮುಖ ಇಲಾಖೆಗಳಲ್ಲಿ ನಡೆಯುವ ಕಾಮಗಾರಿಗಳನ್ನು ಪ್ಯಾಕೇಜ್‌ ಪದ್ಧತಿ ಮಾಡುವುದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಪ್ರತಿ ಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್‌ ಕರೆಯುವಂತೆ ಸೂಚಿಸಲು ಸಿಎಂಗೆ ಮನವಿ ಮಾಡಿದರು.

ಲಂಚದ ವ್ಯವಸ್ಥೆಗೆ ತಡೆಯೊಡ್ಡಿ
ಪ್ರಭಾವಿ ಹಾಗೂ ಲಂಚ ಕೊಟ್ಟು ಹಣ ಬಿಡುಗಡೆ ಮಾಡಿಸಿಕೊಳ್ಳುವ ವ್ಯವಸ್ಥೆಗೆ ತಡೆಯೊಡ್ಡಬೇಕು ಹಾಗೂ ಪ್ರಮುಖ ಇಲಾಖೆಗಳಲ್ಲಿ ಜಾರಿಯಲ್ಲಿರುವ 40 ಪರ್ಸೆಂಟ್‌ ಲಂಚದ ವ್ಯವಸ್ಥೆಯನ್ನು ನಿಯಂತ್ರಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಸಕಾರಾತ್ಮಕ ಸ್ಪಂದನೆ: ಡಿ. ಕೆಂಪಣ್ಣಸಿಎಂ ಭೇಟಿಯ ಅನಂತರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾತನಾಡಿ, ಮುಖ್ಯಮಂತ್ರಿಗಳಿಗೆ ಗುತ್ತಿಗೆದಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರಮುಖವಾಗಿ ಗುತ್ತಿಗೆದಾರರ ಬಾಕಿ ಬಿಲ್‌ ಬಿಡುಗಡೆ ಮಾಡುವುದು, ಪ್ಯಾಕೇಜ್‌ ವ್ಯವಸ್ಥೆ ರದ್ದುಗೊಳಿಸುವುದು ಹಾಗೂ ಹಿರಿತನದ ಆಧಾರದಲ್ಲಿಯೇ ಬಿಲ್‌ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

Advertisement

ರಿವೈಸ್ಡ್ ಎಸ್ಟಿಮೇಷನ್‌ ಮಾಡುವುದರಿಂದಲೂ ಭ್ರಷ್ಟಾಚಾರ ಹೆಚ್ಚಾಗಲಿದೆ. ರಿವೈಸ್ಡ್ ಎಸ್ಟಿಮೇಷನ್‌ ಮಾಡಬಾರದು ಎಂದು ಮನವಿ ಮಾಡಿದ್ದೇವೆ ಎಂದರು.

40 ಪರ್ಸೆಂಟ್‌: ಹೇಳಿಕೆಗೆ ಬದ್ಧ
ರಾಜ್ಯದಲ್ಲಿ ಕಾಮಗಾರಿಗಳಿಗೆ 40 ಪರ್ಸೆಂಟ್‌ ಲಂಚ ಪಡೆಯುತ್ತಿರುವುದರ ಬಗ್ಗೆ ಹೇಳಿಕೆಗೆ ಈಗಲೂ ನಾನು ಬದ್ಧನಾಗಿರುವೆ. ಮೇ 11ರಂದು ಗುತ್ತಿಗೆದಾರರ ಸಭೆ ಕರೆದು ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು. ಅಲ್ಲದೇ ನಾವು ಆರೋಪ ಮಾಡಿರುವ ಇಲಾಖೆಗಳ ಕುರಿತು ದಾಖಲೆಗಳನ್ನು ನೀಡಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡುವಂತೆ ಮನವಿ ಮಾಡಿದ್ದೇವೆ. ಆ ಸಮಿತಿ ರಚನೆ ಮಾಡಿದರೆ, ಅಲ್ಲಿಗೆ ದಾಖಲೆಗಳನ್ನು ಒದಗಿಸುತ್ತೇವೆ ಎಂದು ಕೆಂಪಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next