Advertisement

ಆತಂಕದಲ್ಲಿ ಚಾರ್ಮಾಡಿ 3,4,7ನೇ ತಿರುವು: ಅಲ್ಲಲ್ಲಿ ಕುಸಿಯುತ್ತಿದೆ ಗುಡ್ಡ

09:32 AM Aug 07, 2019 | keerthan |

ಬೆಳ್ತಂಗಡಿ: ಬಿರುಸೇರಿದ ಮಳೆಯಿಂದ ಚಾರ್ಮಾಡಿ ಹಾದಿ ಗುಡ್ಡ ಅಲ್ಲಲ್ಲಿ ಜರಿಯುತ್ತಿದ್ದು ಜೆ.ಸಿ.ಬಿ. ಯಂತ್ರದಿಂದ ತೆರವು ಕಾರ್ಯ ಭರದಿಂದ ಸಾಗುತ್ತಿದೆ.

Advertisement

ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಾಟಿ ರಸ್ತೆ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳ್ತಂಗಡಿ ಪರಿಸರದಲ್ಲಿ ಸೋಮವಾರದಿಂದ ಇಂದಿನವರೆಗೆ 135.5 ಮಿ.ಮೀ ಮಳೆಯಾಗಿದೆ.

ಮತ್ತೆ ಮತ್ತೆ ಕುಸಿಯುತ್ತಿದೆ ಚಾರ್ಮಾಡಿ: ಚಾರ್ಮಾಡಿ ಘಾಟ್ ರಸ್ತೆಯ 3, 4, 7 ನೇ ತಿರುವಿನಲ್ಲಿ ಗುಡ್ಡ ಕುಸಿಯುತ್ತಿದ್ದು, ಮರಗಳು ಕೂಡಾ ಧರಾಶಾಯಿಯಾಗಿವೆ. ಮೂರನೇ ತಿರುವಿನಲ್ಲಿ ದೊಡ್ಡ ಬಂಡೆ ಕುಸಿಯುವ ಹಂತದಲ್ಲಿದ್ದು, ಸವಾರರು ಭೀತಿಗೊಳಗಾಗಿದ್ದಾರೆ. ನೀರು ಹರಿಯಲು ಜಿಸಿಬಿಯಿಂದ ಮಣ್ಣು ತೆರವು ಕಾರ್ಯ‌ ಭರದಿಂದ ಸಾಗಿದೆ.

ಅರಣ್ಯ ಇಲಾಖೆ ಸಿಬಂದಿ, 5 ಮಂದಿ ಪ್ರಕೃತಿ ವಿಕೋಪ ರಕ್ಷಣಾ ತಂಡ, ಬೆಳ್ತಂಗಡಿ, ಧರ್ಮಸ್ಥಳ ಠಾಣೆ ಪೊಲೀಸ್ ಸಿಬಂದಿ, ಆರೋಗ್ಯ, ಮೆಸ್ಕಾಂ ಇಲಾಖೆ ಸಿಬಂದಿ ಸ್ಥಳದಲ್ಲಿ ಮೆಕ್ಕಾಂ ಹೂಡಿದ್ದಾರೆ.

Advertisement

ನೇತ್ರಾವತಿ ನದಿಯು ಮೈದುಂಬಿ ಹರಿಯುತ್ತಿದ್ದು, ಧರ್ಮಸ್ಥಳ ಸ್ನಾನಘಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next