Advertisement

ಬಸ್‌ಪಾಸ್‌ ಮುಂದುವರಿಸಿ: ಎಚ್‌. ಎಂ.ರೇವಣ್ಣ

06:30 AM Jul 12, 2018 | Team Udayavani |

ವಿಧಾನಪರಿಷತ್ತು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಘೋಷಿಸಲಾಗಿರುವ ಉಚಿತ ಬಸ್‌ ಪಾಸ್‌ ವ್ಯವಸ್ಥೆಯನ್ನು ಸರ್ಕಾರ ಮುಂದುವರಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಎಚ್‌. ಎಂ.ರೇವಣ್ಣ ಸರ್ಕಾರವನ್ನು ಆಗ್ರಹಿಸಿದರು.

Advertisement

ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿರುವ ಬಸ್‌ ಪಾಸ್‌ ಯೋಜನೆ ನಿಲ್ಲಬಾರದು.

ಸರಕಾರಕ್ಕೆ ಎಷ್ಟೇ ಆರ್ಥಿಕ ಹೊರೆ ಬಿದ್ದರೂ ಸಹ ಅದನ್ನು ಮುಂದುವರಿಸಲೇಬೇಕು ಎಂದು ಹೇಳಿದರು.

ಅಲ್ಲದೆ, ಬಜೆಟ್‌ನಲ್ಲಿ ಬಡವರಿಗೆ ನೀಡುವ ಅಕ್ಕಿಯಲ್ಲಿ 2 ಕೆ.ಜಿ. ಕಡಿತ ಮಾಡಿರುವುದು ಸರಿಯಲ್ಲ. ಮೊದಲಿನಂತೆ ಏಳು ಕೆ.ಜಿ. ಅಕ್ಕಿಯನ್ನೇ ನೀಡಬೇಕು. ಸರ್ಕಾರ ಈ ವಿಚಾರದಲ್ಲಿ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next