Advertisement

ಆಧಾರ್‌ ತಿದ್ದುಪಡಿ ಮುಂದುವರಿಸಿ

09:26 AM Jun 18, 2019 | Suhan S |

ನಿಡಗುಂದಿ: ಪಟ್ಟಣದ ಆಟಲ್ ಜನಸ್ನೇಹಿ ಕೇಂದ್ರದಲ್ಲಿನ ಆಧಾರ್‌ ಕೇಂದ್ರದಲ್ಲಿ ಕಳೆದ 6 ತಿಂಗಳಿಂದ ಸಿಬ್ಬಂದಿ ರಜೆ ನಿಮಿತ್ತ ಬಂದ್‌ ಮಾಡಲಾದ ಆಧಾರ್‌ ಕಾರ್ಡ್‌ ತಿದ್ದುಪಡಿಯನ್ನು ಕೂಡಲೇ ಬೇರೆ ಸಿಬ್ಬಂದಿಯನ್ನು ನೇಮಿಸಿ ಮುಂದುವರಿಸುವಂತೆ ಒತ್ತಾಯಿಸಿ ಕನಸೇ ನಿಡಗುಂದಿ ತಾಲೂಕು ಘಟಕದಿಂದ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಕನಸೇ ತಾಲೂಕಾಧ್ಯಕ್ಷ ಚಂದ್ರು ಹಳಮನಿ, ನಗರ ಘಟಕ ಅಧ್ಯಕ್ಷ ಮೋತಿಲಾಲ್ ಉಣ್ಣಿಭಾವಿ ಮಾತನಾಡಿ, ಕಳೆದ ಆರು ತಿಂಗಳಿಂದ ಆಧಾರ್‌ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲದೆ ಕಾರ್ಯ ಸ್ಥಗಿತವಾಗಿದೆ. ಇದರಿಂದ ಮಕ್ಕಳ ಶಾಲೆ ದಾಖಲಾತಿ ಸೇರಿ ವಿವಿಧ ಕೆಲಸಕ್ಕೆ ಬೇಕಾದ ಆಧಾರ್‌ ಕಾರ್ಡ್‌ ದೊರೆಯದೆ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಮೊದಲಿನ ಸಿಬ್ಬಂದಿ ರಜೆ ನಿಮಿತ್ತ ಆರು ತಿಂಗಳು ಕೇಂದ್ರಕ್ಕೆ ಬರದ ಪರಿಣಾಮ ಸಮಸ್ಯೆ ಹೆಚ್ಚಾಗಿದ್ದು ಕೂಡಲೇ ಆಧಾರ್‌ ಕೇಂದ್ರಕ್ಕೆ ಬೇರೆ ಸಿಬ್ಬಂದಿಯನ್ನು ನೇಮಕ ಮಾಡಿ ಜನರಿಗೆ ಸೂಕ್ತ ಸೇವೆ ದೊರಕುವಂತೆ ಮಾಡಬೇಕೆಂದು ಆಗ್ರಹಿಸಿದರು.

ರಾಜೇಖಾನ ಪಟೇಲ್, ಪರಶುರಾಮ ಚೌಡೇಕರ, ನಾಗೇಶ ಜಕ್ಕನ್ನವರ, ಸಂತೋಷ, ಮಸ್ತಾನ, ಮಹಾಂತೇಶ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next