Advertisement

ಕೇರಳದಿಂದ ಕರ್ನಾಟಕಕ್ಕೆ ಕಲುಷಿತ ನೀರು: ಪ್ರಕರಣ ದಾಖಲು

09:44 PM Aug 18, 2023 | Team Udayavani |

ವಿಟ್ಲ: ಕೇರಳದ ಕಡೆಯಿಂದ ಕಲುಷಿತ ನೀರನ್ನು ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಖಾಲಿ ಮಾಡುತ್ತಿರುವ ವಿಚಾರದಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪುತ್ತೂರು ಬನ್ನೂರು ನಿವಾಸಿ ಬಿ. ಅಬ್ದುಲ್‌ ಹಮೀದ್‌ (52) ಆರೋಪಿ. ಆತ ಆ. 17ರಂದು ವಿಪರೀತ ದುರ್ವಾಸನೆ ಬೀರುವ ಕಲುಷಿತ ನೀರನ್ನು ರಸ್ತೆಗೆ ಚೆಲ್ಲಿಕೊಂಡು ಹೋಗುತ್ತಿರುವುದು ಸಾರ್ವಜನಿಕರಿಗೆ ಕಂಡುಬಂದಿತ್ತು. ವಿಟ್ಲಕಸಬಾ ಗ್ರಾಮದ ಕಾಶಿಮಠದಲ್ಲಿ ಟ್ಯಾಂಕರ್‌ ಲಾರಿಯನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿರುವುದು ಪತ್ತೆಯಾಗಿತ್ತು.

ಟ್ಯಾಂಕರ್‌ ವಾಹನದಲ್ಲಿದ್ದ ಕಲುಷಿತ ನೀರಿನ ಸಾಗಾಟದ ಬಗ್ಗೆ ಕೇಳಿದಾಗ ಟ್ಯಾಂಕರ್‌ನಲ್ಲಿ ಕಲುಷಿತ ನೀರನ್ನು ಕೇರಳ ಕಡೆಯಿಂದ ತುಂಬಿಸಿಕೊಂಡು ಬಂದು ಕರ್ನಾಟಕದ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ಖಾಲಿ ಮಾಡಲು ಬರುತ್ತಿದ್ದುದಾಗಿ ತಿಳಿಸಿದ್ದ ಎಂದು ಕೇಪು ಗ್ರಾಮದ ನಿವಾಸಿ ರಾಘವ (42) ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next