Advertisement
ಕೇಂದ್ರ ಸರ್ಕಾರವು ಬ್ಯಾಂಕಿಂಗ್ ವಲಯದಲ್ಲಿ ಜನವಿರೋಧಿ ನೀತಿಗಳನ್ನು ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವಿಲೀನ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದೆ. ಇದನ್ನು ವಿರೋಧಿಸಿ “ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್’ ದೇಶವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿತ್ತು. ಕರ್ನಾಟಕದ ಬಹುತೇಕ ಬ್ಯಾಂಕ್ ನೌಕರರು ಇದಕ್ಕೆ ಬೆಂಬಲ ಸೂಚಿಸಿ ವಹಿವಾಟು ಸ್ಥಗಿತಗೊಳಿಸಿದ್ದರು. ಇದರಿಂದ ಗ್ರಾಹಕರಿಗೆ ಸಾಕಷ್ಟು ಸಮಸ್ಯೆಯಾಗಿದೆ.
Related Articles
Advertisement
ಬ್ಯಾಂಕ್ಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಖಾಲಿ ಹುದ್ದೆಗೆ ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಬೇಕು. ಈಗ ಇರುವ ಬ್ಯಾಂಕ್ ನೌಕರರ ಮೇಲೆ ಒತ್ತಡ ಹೆಚ್ಚುತ್ತಿದೆ.ಬ್ಯಾಂಕ್ಗಳಿಗೆ ಬೇಕಿರುವಷ್ಟು ಬಂಡವಾಳವನ್ನು ಸರ್ಕಾರ ಪೂರೈಸುತ್ತಿಲ್ಲ. ಇದರಿಂದ ಬ್ಯಾಂಕ್ಗಳ ವಿಸ್ತರಣೆಗೆ ಹಿನ್ನೆಡೆಯಾಗುತ್ತಿದೆ. ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಒತ್ತು ನೀಡುವುದನ್ನು ನಿಲ್ಲಿಸಬೇಕು ಹಾಗೂ ಖಾಸಗಿ ಮತ್ತು ಸಣ್ಣ ಬ್ಯಾಂಕುಗಳ ಸ್ಥಾಪನೆಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.
ಇಂದು ನಾಳೆ ಒತ್ತಡ ಗೌರಿ ಗಣೇಶ ಹಬ್ಬಕ್ಕೆ ಎರಡೇ ದಿನ ಇರುವಾಗ ಬ್ಯಾಂಕ್ ನೌಕರರು ಪ್ರತಿಭಟನೆ ಮಾಡಿರುವುದರಿಂದ ಬುಧವಾರ ಅಥವಾ ಗುರುವಾರ ಬ್ಯಾಂಕ್ನಲ್ಲಿ ಒತ್ತಡ ಹೆಚ್ಚಿರುತ್ತದೆ. ಸರ್ವರ್ ಸಮಸ್ಯೆಯಿಂದ ಹಣ ಜಮಾ ಆಗದೇ ಉಳಿಯುವ ಸಾಧ್ಯಯೂ ಇರುತ್ತದೆ. ಬಂದ್ನಿಂದಾಗಿ ನಿತ್ಯ ಬ್ಯಾಂಕ್ ವಹಿವಾಟು ಮಾಡುವವರಿಗೂ ತೊಂದರೆ ಆಗಿದೆ.