Advertisement

ಟಾಯ್ಲೆಟ್‌ ಪಿಟ್‌ ನಿರ್ಮಾಣ: ಸ್ಥಳೀಯರಲ್ಲಿ ಆತಂಕ!

12:27 AM Oct 15, 2019 | Team Udayavani |

ಉಡುಪಿ: ಉಡುಪಿ ಸಿಟಿ ಬಸ್ಸು ತಂಗುದಾಣದ ಸಮೀಪ ನಿರ್ಮಾಣವಾಗುತ್ತಿರುವ ನರ್ಮ್ ಬಸ್ಸು ತಂಗುದಾಣದಲ್ಲಿ ಈಗ ಟಾಯ್ಲೆಟ್‌ ಪಿಟ್‌ ನಿರ್ಮಾಣವಾಗುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ತ್ಯಾಜ್ಯ ನೀರು ಸಮೀಪದಲ್ಲಿರುವ ಮನೆ, ಅಂಗಡಿಗಳಿಗೆ ಹರಡಬಹುದು ಎಂಬುವುದು ಇಲ್ಲಿನವರ ಅಭಿಪ್ರಾಯ.

Advertisement

ಅಕ್ಟೋಬರ್‌ 2017ರಲ್ಲಿ ಈ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಇದೀಗ ಅಂತಿಮ ಹಂತದಲ್ಲಿದೆ. ಕೇವಲ ಬಸ್ಸು ತಂಗುದಾಣ ಮಾತ್ರವಲ್ಲದೆ ವಾಣಿಜ್ಯ ಬಳಕೆಗೆ ಉಪಯೋಗವಾಗುವಂತೆ ಮಾಡುವ ಮೂಲಕ ಆದಾಯ ಗಳಿಸುವ ಉದ್ದೇಶವನ್ನೂ ಕೆಎಸ್ಸಾರ್ಟಿಸಿ ಹೊಂದಿದೆ.

ಯಾವುದೇ ಹಾನಿಯಿಲ್ಲ
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವಂತೆ ನಗರಸಭೆಯ ಅನುಮತಿ ಪಡೆದು ನಗರಸಭೆಯ ಮಾರ್ಗಸೂಚಿಯಂತೆಯೇ ಈ ಟಾಯ್ಲೆಟ್‌ ಪಿಟ್‌ಗಳನ್ನು ರಚಿಸಲಾಗಿದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ವೈಜ್ಞಾನಿಕವಾಗಿ ನಿರ್ಮಾಣ
ಕೆಎಸ್ಸಾರ್ಟಿಸಿ ನರ್ಮ್ ಬಸ್‌ ತಂಗುದಾಣದಲ್ಲಿ ನಗರಸಭೆಯ ಅನುಮತಿ ಪಡೆದೇ ಶೌಚಗುಂಡಿ ನಿರ್ಮಾಣ ಮಾಡಲಾಗುತ್ತಿದೆ. ನಗರಸಭೆಯ ಅನುಸೂಚಿಯಂತೆ ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ. ಇದರಿಂದಾಗಿ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. -ರಾಘವೇಂದ್ರ,ಪರಿಸರ ಅಭಿಯಂತರರು. ಉಡುಪಿ ನಗರಸಭೆ.

Advertisement

Udayavani is now on Telegram. Click here to join our channel and stay updated with the latest news.

Next