Advertisement

ಡಿ.6ರಿಂದ ರಾಮ ಮಂದಿರ ನಿರ್ಮಾಣ: ಸಾಕ್ಷಿ

10:05 AM Oct 28, 2019 | Team Udayavani |

ಉನ್ನಾವ್‌: ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಪರವೇ ತೀರ್ಪು ಬರಲಿದ್ದು, ಡಿಸೆಂಬರ್‌ 6ರ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹರಾಜ್‌ ತಿಳಿಸಿದ್ದಾರೆ.

Advertisement

ನ್ಯಾಯಾಲಯದಲ್ಲಿ ಅಂತಿಮ ವಿಚಾರ ಣೆಗಳ ವೇಳೆ, ಪುರಾತತ್ವ ಇಲಾಖೆ ವಾಸ್ತವ ಗಳನ್ನು ತಿಳಿಸಿದೆ. ಶಿಯಾ ಬೋರ್ಡ್‌ ಕೂಡ ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಿಸುವಂತೆ ಲಿಖೀತವಾಗಿ ತಿಳಿಸಿದೆ. ಸನ್ನಿ ಬೋರ್ಡ್‌ ಕೂಡ ಮಂದಿರದ ಪರವೇ ಇದೆ. ಹೀಗಾಗಿ ನಮ್ಮ ಪರ ತೀರ್ಪು ಬರಲಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಏನೇ ಬರಲಿ, ಡಿ. 6ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆ ಕೆಲಸಗಳು ಶುರುವಾಗಲಿವೆ ಎಂದೂ ಅವರು ಹೇಳಿದ್ದಾರೆ. 150 ವರ್ಷಗಳಿಂದ ಇತ್ಯರ್ಥವಾಗದ ಆಯೋಧ್ಯೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ನಿರಂತರ 40 ದಿನಗಳ ಕಾಲ ವಿಚಾರಣೆ ನಡೆದಿದೆ. ಇದಕ್ಕಾಗಿ ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸುತ್ತೇನೆ.

ಎರಡೂ ಕಡೆಯಿಂದ ಗಂಭೀರವಾಗಿ ವಾದ ಮಂಡಿಸಲಾಗಿದೆ. ಶೀಘ್ರ ತೀರ್ಪು ಹೊರಬರಲಿದ್ದು, ಅದು ನಮ್ಮ ಪರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next