Advertisement
ನೇತ್ರಾವತಿ ನದಿ ಪಾತ್ರದಲ್ಲಿಯೇ 6.5 ಕಿ.ಮೀ. ಉದ್ದಕ್ಕೆ ದ್ವಿಪಥ ರಸ್ತೆ ನಿರ್ಮಾಣ ಯೋಜನೆ ಇದಾಗಿದ್ದು, ಈ ರಿಂಗ್ ರಸ್ತೆ ನಿರ್ಮಾಣಕ್ಕೆ ಬಹುತೇಕ ಕಡೆ ಜಮೀನು ಖಾಸಗಿ ಮೂಲಕವೇ ಹಾದು ಹೋಗ ಬೇಕಾ ಗಿರುವ ಕಾರಣ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನವೇ ದೊಡ್ಡ ಸಮಸ್ಯೆಯಾಗಿದೆ.
Related Articles
ನೇತ್ರಾವತಿ ಸೇತುವೆ- ಕಣ್ಣೂರು ರಸ್ತೆ ರಿಂಗ್ ರೋಡ್ ಯೋಜನೆ ಕಾರ್ಯಗತಗೊಂಡರೆ ಮೂರು ಹೆದ್ದಾರಿಗಳ ಸಂಪರ್ಕ ಸೇತುವಾಗಲಿದೆ.
Advertisement
ಪಡೀಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಬಳಿಯಿಂದ ಕನ್ನಗುಡ್ಡೆ ಮೂಲಕ ಕುಲಶೇಖರವರೆಗೆ 5 ಕೋ.ರೂ. ವೆಚ್ಚದ ರಿಂಗ್ ರೋಡ್ ರಸ್ತೆ ನಿರ್ಮಾಣ ಯೋಜನೆಗೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದ್ದಾರೆ. ನೇತ್ರಾವತಿ ಸೇತುವೆ- ಕಣ್ಣೂರು ರಸ್ತೆ ರಿಂಗ್ ರೋಡ್ ಯೋಜನೆಯೂ ಕಾರ್ಯಗತಗೊಂಡರೆ ನೇತ್ರಾವತಿ ಸೇತುವೆಯಿಂದ ಕುಲಶೇಖರದವರೆಗೆ ರಸ್ತೆ ನಿರ್ಮಾಣವಾಗಲಿದ್ದು, ರಾಷ್ಟ್ರೀಯ ಹೆದ್ದಾರಿಗಳಾದ 66, 75 ಹಾಗೂ 169ರ ನಡುವೆ ಸಂಪರ್ಕವೇರ್ಪಡಲಿದೆ. ಮೂಡುಬಿದಿರೆ ಕಡೆಯಿಂದ ತೊಕ್ಕೊಟ್ಟು, ಉಳ್ಳಾಲ, ಕೇರಳ ಕಡೆಗೆ ಹೋಗುವ ವಾಹನಗಳು ಮಂಗಳೂರು ನಗರಕ್ಕೆ ಪ್ರವೇಶಿಸದೆ ಕಣ್ಣೂರು ಮೂಲಕ ನೇತ್ರಾವತಿ ಸೇತುವೆಗೆ ಬಂದು ಸಾಗಬಹುದಾಗಿದೆ. ಈ ಹಾದಿಯಲ್ಲಿ ಬರುವ ಪ್ರದೇಶಗಳು ಕೂಡ ಅಭಿವೃದ್ಧಿಯಾಗಲಿದ್ದು ಹಾಗೂ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ.
ಜಾಗ ಹೊಂದಿಸಿಕೊಳ್ಳಲು ಪ್ರಯತ್ನಉಳ್ಳಾಲ ಸೇತುವೆಯಿಂದ ಕಣ್ಣೂರುವರೆಗೆ ನೇತ್ರಾವತಿ ನದಿಪಾತ್ರದಲ್ಲಿ ರಸ್ತೆ ನಿರ್ಮಾಣ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಈಗಾಗಲೇ ಪ್ರಯತ್ನ ಮುಂದುವರಿದಿದೆ. ಯೋಜನೆ ಅನುಷ್ಠಾನವಾಗುವ ಬಹುತೇಕ ಪ್ರದೇಶ ಖಾಸಗಿ ಜಮೀನು ಆಗಿರುವುದರಿಂದ ಜಾಗ ಹೊಂದಿಸಿಕೊಳ್ಳುವ ಸಮಸ್ಯೆ ಎದುರಾಗಿದೆ. ಖಾಸಗಿಯವರ ಮನವೊಲಿಸಿ ಜಾಗ ಹೊಂದಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಒಂದೊಮ್ಮೆ ಜಾಗ ಲಭ್ಯವಾಗದಿದ್ದರೆ ಯೋಜನೆ ಕಾರ್ಯಗತಗೊಳ್ಳಲು ಸಮಸ್ಯೆಯಾಗುತ್ತದೆ.
– ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ ಕ್ಷೇತ್ರ ಭೂ ಸ್ವಾಧೀನ ಸಮಸ್ಯೆ
ಶಾಸಕ ವೇದವ್ಯಾಸ ಕಾಮತ್ ಅವರು ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಆಸಕ್ತಿ ವಹಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಇದರಂತೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದರು. ಆದರೆ ಈ ರಸ್ತೆ ಬಹುತೇಕ ಖಾಸಗಿ ಜಮೀನುಗಳಲ್ಲಿ ಹಾದು ಹೋಗುತ್ತಿರುವುದರಿಂದ ಅವರಿಂದ ಜಾಗ ಪಡೆದುಕೊಳ್ಳಬೇಕಾಗಿದೆ. ಆದರೆ ಈಗ ಭೂ ಸ್ವಾಧೀನ ಸಮಸ್ಯೆ ಉಂಟಾಗಿರುವುದರಿಂದ ಯೋಜನೆಗೆ ತೊಡಕಾಗಿದೆ. ಜಾಗ ಲಭ್ಯವಾಗದಿದ್ದರೆ ಯೋಜನೆಯನ್ನು ಕೈಬಿಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. - ಕೇಶವ ಕುಂದರ್