Advertisement

ನಿರ್ಮಾಣ ಲೋಪ: ತನಿಖೆಗೆ ಆದೇಶ

05:00 AM Jun 27, 2020 | Lakshmi GovindaRaj |

ಬೆಂಗಳೂರು: ನಗರದ ಕೆಂಗೇರಿ ಬಳಿ ಮಳೆ ನೀರುಗಾಲುವೆ ಒಡೆದು ಅವಾಂತರ ಸೃಷ್ಟಿಸಿದ ಬೆನ್ನಲ್ಲೇ ಉದ್ದೇಶಿತ ರಾಜಕಾಲುವೆ ನಿರ್ಮಾಣದಲ್ಲಾದ ಲೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ  ಸಲ್ಲಿಸುವಂತೆ ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

Advertisement

ಈ ಸಂಬಂಧ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, “ನಗರದಲ್ಲಿ ಗುರುವಾರ ಸುರಿದ ಮಳೆಗೆ ಕೆಂಗೇರಿ ಬಳಿ  ತಡೆಗೋಡೆ ಕುಸಿದು, ರಸ್ತೆ ಕಿತ್ತುಹೋಗಿದೆ. ಇಡೀ ನೀರುಗಾಲುವೆ ತಡೆಗೋಡೆ ನಿರ್ಮಿಸಲು ಬಿಬಿಎಂಪಿ ಮಾಡಿದ ಖರ್ಚುವೆಚ್ಚ ಸಹಿತ ಕಾಮಗಾರಿ ಅನುಷ್ಠಾನ, ತಡೆಗೋಡೆ ಕುಸಿಯಲು ಕಾರಣಗಳು ಸೇರಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.  ಸಮಿತಿ ರಚಿಸಿ ಮೌಲ್ಯಮಾಪನ ನಡೆಸಬೇಕು. ಕರ್ತವ್ಯಲೋಪ ಕಂಡುಬಂದರೆ ಕ್ರಮವಹಿಸಲು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next