Advertisement

BJP ಪಕ್ಷದಿಂದ ಸಂವಿಧಾನ ಬದಲು: ರಾಹುಲ್‌ ಗಾಂಧಿ ವಿರುದ್ಧ ದೂರು

12:50 AM May 10, 2024 | Team Udayavani |

ಮುಂಬಯಿ: ಬಿಜೆಪಿ ದೇಶದ ಸಂವಿಧಾನ ಬದಲಿಸಲಿದೆ ಎಂದು ಕಳೆದ ಕೆಲವು ದಿನಗಳಿಂದ ಆರೋಪಿಸುತ್ತಿರುವ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮ್‌ದಾಸ್‌ ಅಠಾವಳೆ ಚುನಾವಣ ಆಯೋಗಕ್ಕೆ ದೂರು ನೀಡಿದ್ದಾರೆ.

Advertisement

ರಾಹುಲ್‌ ಇಂಥ ಹೇಳಿಕೆ ನೀಡುವುದಕ್ಕೆ ನಿರ್ಬಂಧ ಹೇರಬೇಕು ಎಂದು ಕೋರಲಾಗಿದೆ ಎಂದು ರಾಮ್‌ದಾಸ್‌ ತಿಳಿಸಿದರು. ರಾಹುಲ್‌ ಗಾಂಧಿ ಪದೇಪದೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂದು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಸಹ ಬಹಳಷ್ಟು ಬಾರಿ ಈ ಆರೋಪವನ್ನು ನಿರಾಕರಿಸಿದ್ದಾರೆ. ರಾಹುಲ್‌ ಅವರ ಈ ಹೇಳಿಕೆಯ ವಿರುದ್ಧ ಚುನಾವಣ ಆಯೋಗಕ್ಕೆ ನಾನು ದೂರು ನೀಡಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯೂ ಆಗ್ರಹಿಸಿದ್ದೇನೆ ಎಂದು ಅಠಾವಳೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next