Advertisement

ನಿಂತಿದ್ದ ಬೈಕ್‌ಗೆ ಮತ್ತೂಂದು ಬೈಕ್‌ ಡಿಕ್ಕಿಯಾಗಿ ಪೇದೆ ಸಾವು

11:10 AM Jan 13, 2017 | Team Udayavani |

ಬೆಂಗಳೂರು: ನಿಂತಿದ್ದ ಬೈಕ್‌ಗೆ ಮತ್ತೂಂದು ಬೈಕ್‌ಡಿಕ್ಕಿಯಾಗಿ ಕೆಎಸ್‌ಆರ್‌ಪಿ ಕಾನ್‌ಸ್ಟೆàಬಲ್‌ ಒಬ್ಬರು ಸಾವನ್ನಪ್ಪಿರುವ ಘಟನೆ ಆಡುಗೋಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ನಾರಾಯಣ ಜಂಕ್ಷನ್‌ ಸಮೀಪ ಬುಧವಾರ ರಾತ್ರಿ ನಡೆದಿದೆ. ಕೆಎಸ್‌ಆರ್‌ಪಿ ಮೊದಲ ಬೆಟಾಲಿಯನ್‌ನ ಪೇದೆ ಚಂದನ್‌(32) ಮೃತ ದುರ್ದೈವಿ.

Advertisement

ಅಪಘಾತದಲ್ಲಿ ಗಾಯಗೊಂಡಿರುವ ಬೈಕ್‌ ಚಾಲಕ ಬುದ್ಧ ಹಾಗೂ ಪಾದಚಾರಿ ಸಿರಾಜ್‌ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಂದನ್‌ ಅವರು ವಿಪ್ರೋ ಜಂಕ್ಷನ್‌ ಕಡೆಯಿಂದ ನಾರಾಯಣಪುರ ಜಂಕ್ಷನ್‌ ಕಡೆಗೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಎಸ್‌ಆರ್‌ಪಿಯಲ್ಲಿ ಸೇವೆ ಸಲ್ಲಿ ಸುತ್ತಿದ್ದ ಚಂದನ್‌ ಅವರು ಆಡು ಗೋಡಿಯ ಕೆಎಸ್‌ಆರ್‌ಪಿ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದು, ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ನಾರಾಯಣಪುರ ಜಂಕ್ಷನ್‌ ಬಳಿ ಬೈಕ್‌ ಸ್ಕಿಡ್‌ ಆಗಿ ಬಿದ್ದಿದ್ದು ಸ್ಥಳೀಯರು ರಕ್ಷಿಸಿದ್ದರು.

ಅವರು ಮತ್ತೆ ಬೈಕ್‌ ಬಳಿ ಬಂದು ನಿಂತಿದ್ದಾಗ ಅದೇ ಮಾರ್ಗದಲ್ಲಿ ಅತಿವೇಗವಾಗಿ ಬೈಕ್‌ ಚಲಾಯಿಸಿಕೊಂಡು ಬಂದ ಬುದ್ಧ, ಚಂದನ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೆ, ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಿರಾಜ್‌ ಎಂಬುವರಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾನೆ. ಬಳಿಕ  ಚಂದನ್‌ ಕೊನೆಯುಸಿರೆಳೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next