Advertisement

CPM ನಾಯಕನ ಹತ್ಯೆ ಸಂಚು: ಕಾಂಗ್ರೆಸ್‌ನ ಸುಧಾಕರನ್‌ಗೆ ರಿಲೀಫ್

11:07 PM May 21, 2024 | Team Udayavani |

ತಿರುವನಂತಪುರಂ: ಎಲ್‌ಡಿಎಫ್ ಮುಖ್ಯಸ್ಥ ಇ.ಪಿ.ಜಯರಾಜನ್‌ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಕೆ.ಸುಧಾಕರನ್‌ರನ್ನು ಕೇರಳ ಹೈಕೋರ್ಟ್‌ ಖುಲಾಸೆಗೊಳಿಸಿದೆ.

Advertisement

1995ರಲ್ಲಿ ಜಯ ರಾಜನ್‌ ಆಂಧ್ರಪ್ರದೇಶದಲ್ಲಿ ರೈಲಿನಲ್ಲಿ ತೆರಳುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಸಂಚು ರೂಪಿಸಿದ್ದಾರೆಂದು ಆರೋಪಿಸಿ ಸುಧಾರಕನ್‌ ವಿರುದ್ಧ ಆಂಧ್ರದಲ್ಲಿ ದೂರು ದಾಖಲಾಗಿತ್ತು. ಆ ಬಳಿಕ ಕೇರಳದಲ್ಲೂ ಕೇಸು ದಾಖಲಿಸಲಾಗಿತ್ತು. ಅದನ್ನು ಪ್ರಶ್ನಿಸಿ ಸುಧಾಕರನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದೀಗ ನ್ಯಾ. ಜಿಯಾದ್‌ ರೆಹಮಾನ್‌ ಅವರ ಪೀಠವು ಕೇರಳದಲ್ಲಿ ದಾಖಲಾದ 2ನೇ ಎಫ್ಐಆರ್‌ನಿಂದ ಸುಧಾಕರನ್‌ ಅವರನ್ನು ಖುಲಾಸೆಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next