Advertisement

ಹರಿಯಾಣ; ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸುರ್ಜೇವಾಲಾಗೆ 530 ಮತಗಳಿಂದ ಸೋಲು

10:00 AM Oct 26, 2019 | Team Udayavani |

ಹರಿಯಾಣ/ಮಹಾರಾಷ್ಟ್ರ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಕೈತಾಲ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಎದುರಾಳಿ ಬಿಜೆಪಿಯ ಲೀಲಾ ರಾಮ್ ಎದುರು ಪರಾಜಯಗೊಂಡಿದ್ದಾರೆ.

Advertisement

ಹರಿಯಾಣದ ಕೈತಾಲ್ ವಿಧಾನಸಭಾ ಕ್ಷೇತ್ರದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಕೇವಲ 530 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಸುರ್ಜೇವಾಲಾ ಕೈತಾಲ್ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2014 ಮತ್ತು 2009ರಲ್ಲಿ ಶಾಸಕರಾಗಿದ್ದರು.

ಕೈತಾಲ್ ಕ್ಷೇತ್ರದ ಜನರು ನೀಡಿದ ಜನಾದೇಶ ಸ್ವೀಕರಿಸುವುದಾಗಿ ರಣದೀಪ್ ಸಿಂಗ್ ಸುರ್ಜೇವಾಲಾ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next