Advertisement

ಪ್ರಿಯಾಂಕಾ ಕಾಂಗ್ರೆಸ್‌ನ ಕೊನೇ ಅಸ್ತ್ರ: ಸಚಿವ ಹೆಗಡೆ

01:32 AM Feb 06, 2019 | |

ಶಿರಸಿ: ಅಣ್ಣನ ಜತೆ ತಂಗಿ ಬರುತ್ತಿದ್ದಾಳೆ. ರಾಹುಲ್‌ ಗಾಂಧಿ ಜತೆ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್‌ನ ಕೊನೆಯ ಚುನಾ ವಣಾ ಅಸ್ತ್ರ. ಅಲ್ಲಿಗೆ ಕಾಂಗ್ರೆಸ್‌ ಮಹಾಭಾರತ ಮುಗಿಯು ತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

Advertisement

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಬತ್ತಳಿಕೆಯಲ್ಲಿ ಇರುವ ಕೊನೆಯ ಅಸ್ತ್ರ ಪ್ರಿಯಾಂಕಾ ವಾದ್ರಾ. ರಾಹುಲ್‌ಗಿಂತ ಪ್ರಿಯಾಂಕಾ ಪ್ರಭಾವಿ ಯಂತೆ. ಇಂದಿರಾ ಗಾಂಧಿ ಅವತಾರವಂತೆ ಎಂದು ವರ್ಣಿಸಲಾಗುತ್ತಿದೆ. ಅವಳ ಬಂಡವಾಳವೂ ಇನ್ನೇನು ಬಯಲಾಗಲಿದೆ. ಕಾಂಗ್ರೆಸ್‌ ನೆಹರೂ ಕುಟುಂಬದ ಹೊರತಾಗಿ ಯಾರನ್ನೂ ಒಪ್ಪದು. ಕಾಂಗ್ರೆಸ್‌ ಭ್ರಷ್ಟಾಚಾರದ ಕೂಪ. ಭ್ರಷ್ಟಾಚಾರದಲ್ಲಿ ನಿರಂತರ ದಾಖಲೆಗಾಗಿ ಕಾಂಗ್ರೆಸ್‌ ಸರ್ಕಾರಕ್ಕೆ ನೊಬೆಲ್‌ ಪ್ರಶಸ್ತಿ ನೀಡಬೇಕು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಕಡೆ ಕಾಂಗ್ರೆಸ್‌ ರಾಷ್ಟ್ರದ್ರೋಹಿಗಳನ್ನು ಇಟ್ಟಿದೆ. ದೇಶದ ಎಲ್ಲ ವ್ಯವಸ್ಥೆಯಲ್ಲೂ ಅರ್ಬನ್‌ ನಕ್ಸಲ್‌ ತುಂಬಿಕೊಂಡಿದ್ದಾರೆ. ಮಾಧ್ಯಮದಲ್ಲೂ ಅರ್ಬನ್‌ ನಕ್ಸಲ್‌ ಇದ್ದಾರೆ. ಅವರೇ ಎಲ್ಲೂ ಇಲ್ಲದ ನನ್ನನ್ನು ಜನಪ್ರಿಯತೆಗೆ ತಂದವರು. ವಿವಾದಿತ ಹೇಳಿಕೆ ಎಂದು ಪ್ರಚಾರ ನೀಡಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next