Advertisement

ಕಾಂಗ್ರೆಸ್‌ನವರೇ ಕೌರವರು: ಸಿ.ಟಿ.ರವಿ

09:59 AM Jan 22, 2018 | Team Udayavani |

ಹಾಸನ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಗೋಪಾಲಕರ, ಗೋರಕ್ಷಕರ ವಿರುದ್ಧವಿದೆ. ಹಾಗಾಗಿ, ಆ ಪಕ್ಷದಲ್ಲಿ ಶ್ರೀಕೃಷ್ಣನಿಲ್ಲ, ಪಾಂಡವರೂ ಇಲ್ಲ. ಅವರು ಬಿಜೆಪಿಯೊಂದಿಗಿದ್ದಾರೆ. ಕೌರವರು ಕಾಂಗ್ರೆಸ್‌ನಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಅವರು ವಿಶ್ಲೇಷಿಸಿದರು.

Advertisement

ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆ ರಾಜ್ಯದಲ್ಲಿ ಕೌರವರು- ಪಾಂಡವರ ನಡುವಿನ ಹೋರಾಟ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಒಪ್ಪುತ್ತೇನೆ. ಮುಂಬರುವ ಕುರುಕ್ಷೇತ್ರವೆಂಬ ಚುನಾವಣೆಯಲ್ಲಿ ಪಾಂಡವರಿರುವ ಬಿಜೆಪಿ ಗೆಲ್ಲುತ್ತದೆ. ಕೌರವರ ಪಕ್ಷ ಕಾಂಗ್ರೆಸ್‌ ಸೋಲುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next